ತರೀಕೆರೆ ತಾಲೂಕಿನ ಶಾರದಮ್ಮ ಅವರು ಬೇಸಾಯದ ಕೆಲಸ ಮಾಡುತ್ತಲೇ ಜನಪದ ಹಾಡುಗಳನ್ನು ತಮ್ಮ ಸೋದರಿಯೊಂದಿಗೆ ಸೇರಿ ಕಲಿತವರು.ಬೀಸುವ ಕಲ್ಲಿನ ಪದಗಳು, ಭಜನೆ, ಜನಪದ ಗೀತೆಗಳು, ಸೋಬಾನೆ ಪದಗಳನ್ನು ತಮ್ಮ ಸುತ್ತಲ ಪರಿಸರದಲ್ಲಿ ಕೇಳುತ್ತಲೇ ಬೆಳೆದವರು.
ವಿವಿಧ ಕಮ್ಮಟಗಳಲ್ಲಿ ಕಿರಿಯರಿಗೆ ಜನಪದ ಗೀತೆಗಳನ್ನು ಕಲಿಸಿರುವ ಶಾರದಮ್ಮ ಅವರು ಜನಪದ ಸಿರಿಯನ್ನು ಮುಂದಿನ ತಲೆಮಾರಿಗೆ ಮುನ್ನಡೆಸುವ ಕಾಯಕದಲ್ಲಿ ಈಗಲೂ ನಿರತರು.
‘ಜನಪದ ಸಂಭ್ರಮ’ ಧ್ವನಿಸುರುಳಿಯನ್ನು ಸಹ ಶಾರದಮ್ಮನವರು ಹೊರ ತಂದಿದ್ದು ಇವರ ಸಾಧನೆಯನ್ನು ಮೆಚ್ಚಿ ಹಲವು ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬಂದಿವೆ. ಶಾರದಮ್ಮನವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಗೌರವಕ್ಕೂ ಭಾಜನರಾಗಿದ್ದಾರೆ.
Categories
ಶಾರದಮ್ಮ
