Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀನಿವಾಸ ಉಡುಪ

ಸುಗಮ ಸಂಗೀತ ಕ್ಷೇತ್ರವನ್ನೇ ಸಾಧನಾ ಕ್ಷೇತ್ರವಾಗಿಸಿಕೊಂಡವರಲ್ಲಿ ನಗರ ಶ್ರೀನಿವಾಸ ಉಡುಪ ಸಹ ಪ್ರಮುಖರು. ಗಾಯಕರು, ಸಂಗೀತ ಶಿಕ್ಷಕರು ಮತ್ತು ಸಂಘಟಕರಾಗಿ ಅವರದ್ದು ಅನುಕರಣೀಯ ಸಾಧನೆ.
ಶಿವಮೊಗ್ಗ ಜಿಲ್ಲೆಯ ನಗರ ಶ್ರೀನಿವಾಸ ಉಡುಪರ ಹುಟ್ಟೂರು. ನಾಲ್ಕು ತಲೆಮಾರಿನಿಂದಲೂ ಸಂಗೀತದ ಹಿನ್ನೆಲೆಯುಳ್ಳ ಕುಟುಂಬ. ಹುಟ್ಟಿನಿಂದಲೇ ಸ್ವರಸಂಸ್ಕಾರ. ವಿದ್ವಾನ್ ಬಾಲಕೃಷ್ಣರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಪಂಡಿತ್ ಶಿವರಾಜ್ ಗವಾಯಿಗಳ ಬಳಿ ಹಿಂದೂಸ್ತಾನಿ ಸಂಗೀತದ ಕಲಿಕೆ. ಶಿವಮೊಗ್ಗ ಸುಬ್ಬಣ್ಣರ ಸಖ್ಯದಿಂದ ಸುಗಮ ಸಂಗೀತದತ್ತ ಒಲವು, ಮೈಸೂರು ಅನಂತಸ್ವಾಮಿ ಬಳಿ ಶಿಷ್ಯತ್ವ-ಗಾಯನ, ೧೯೬೭ರಲ್ಲಿ ಆಕಾಶವಾಣಿ ಕಲಾವಿದರಾಗಿ ಮುನ್ನೆಲೆಗೆ ಐದು ದಶಕದಿಂದಲೂ ನಿರಂತರ ಸಂಗೀತ ಕಾರ್ಯಕ್ರಮಗಳ ಮೂಲಕ ಶೋತೃಗಳಿಗೆ ಸಂಗೀತದ ರಸದೌತಣ ಉಣಬಡಿಸಿದ ಹಿರಿಮೆ, ದೇಶಾದ್ಯಂತ ಹಾಗೂ ಹಲವು ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ. ಸಾಧನಾ ಸಂಗೀತ ಶಾಲೆಯಿಂದ ಆರಂಭವಾದ ‘ಗುರುತ್ವ’ ಇಂದಿಗೂ ಅವ್ಯಾಹತ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಗೌರವ ಖಜಾಂಚಿ-ಕಾರ್ಯದರ್ಶಿಯಾಗಿ ಸಂಘಟನೆಯಲ್ಲೂ ಛಾಪು.ಕರ್ನಾಟಕ ಕಲಾಶ್ರೀ, ಗಾನಗಂಧರ್ವ ಮತ್ತಿತರ ಪ್ರಶಸ್ತಿಗಳಿಂದ ಭೂಷಿತರಾದ ಶಾರದಾಪುತ್ರರು.