Categories
ಬಯಲಾಟ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಎಲ್ಲವೂ ರೊಡ್ಡಪ್ಪನವರ

ಕನ್ನಡ ರಂಗಭೂಮಿ ಕಂಡ ಅಭಿಜಾತ ಕಲಾವಿದೆ ನಾಡೋಜ ಯಲ್ಲವ್ವ ರೊಡ್ಡಪ್ಪನವರ, ಬಯಲಾಟದ ಅಪ್ರತಿಮ ಪಾತ್ರಧಾರಿ.
ಬಾಲ್ಯದಿಂದಲೂ ಚೌಡಿಕೆ ಪದಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ಯಲ್ಲವ್ವ ೧೩ನೇ ವಯಸ್ಸಿನಲ್ಲಿ ಕಂದಗಲ್ಲ ಹನುಮಂತರಾಯರ ‘ಕುರುಕ್ಷೇತ್ರ’ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದವರು. ಕೃಷ್ಣನ ಪಾತ್ರಧಾರಿಯಾಗಿ ಕಲಾಸೇವೆಗೆ ಮುನ್ನುಡಿ, ಲೋಕಯ್ಯ ಹೊಳಬಸಯ್ಯ ಗಣಾಚಾರಿ ಮಾಸ್ತರ ಮತ್ತು ದೇಶಪಾಂಡೆಯವರ ಮೂಲಕ ಜಾನಪದ ರಂಗಭಭೂಮಿಗೆ ಪ್ರವೇಶ ಪಡೆದ ಯಲ್ಲವ್ವ ಆನಂತರ ಶ್ರೀಕೃಷ್ಣ ಸಂಗೀತ ನಾಟಕ ಕಂಪನಿಗೆ ಸೇರಿ ಹಾಡುಗಬ್ಬ ಪಾರಿಜಾತವನ್ನೇ ಬದುಕಿನ ಭಾವವಾಗಿಸಿಕೊಂಡರು. ಬಯಲಾಟದ ಪಾರಿಜಾತದಲ್ಲಿ ಅಭಿನಯ. ಸಹಜ ನಟನೆ ಮತ್ತು ಗಾಯನ ಎಲ್ಲವನ ಪ್ರತಿಭಾಶಕ್ತಿ, ಪಾರಿಜಾತದಲ್ಲಿ ಕೃಷ್ಣ, ರುಕ್ಕಿಣಿ, ಗೊಲ್ಲತಿ, ನಾರದ, ದೊರಸಾನಿ, ಸತ್ಯಭಾಮೆ ಮತ್ತಿತರ ಪಾತ್ರ ನಿರ್ವಹಿಸಿದ ಎಲ್ಲವ್ವನ ಕೃಷ್ಣ-ಕೊರವಂಜಿ ಪಾತ್ರಾಭಿನಯ ಅವಿಸ್ಮರಣೀಯ. ಅಭಿನಯದ ಜೊತೆಗೆ ಹಿಮ್ಮೇಳ ಕಲಾವಿದೆ, ಕಂಪನಿ ಮಾಲೀಕರಾಗಿಯೂ ಸಮರ್ಥವಾಗಿ ಜವಬ್ದಾರಿ ನಿಭಾಯಿಸಿದ ಎಲ್ಲವ್ವ ದಮನಿತ ಹೆಣ್ಣುಮಕ್ಕಳಿಗೊಂದು ಮಾದರಿ.