Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀಮತಿ ಗೀತಾ ರಾಮಾನುಜಂ

ಶಿಕ್ಷಣ ಕ್ಷೇತ್ರವೂ ಸೇರಿದಂತೆ ಹಲವು ರಂಗಗಳಲ್ಲಿ ಸಾಧನೆಗೈದಿರುವ ಬಹುಮುಖ ಪ್ರತಿಭೆ ಡಾ.ಗೀತಾ ರಾಮಾನುಜಂ, ಶಿಕ್ಷಣತಜ್ಞರು, ನಾಟಕಕಾರರು, ಅಂಕಣಕಾರರು, ಆಪ್ತ ಸಮಾಲೋಚಕಲರು, ಆಡಳಿತಗಾರರು ಜೊತೆಗೆ ವಾಗ್ರಿಗಳು ಕೂಡ.
ಸಾಂಸ್ಕೃತಿಕ ನಗರಿ ಮೈಸೂರಿನ ಕೊಡುಗೆ ಗೀತಾರಾಮಾನುಜಂ. ಮೈಸೂರು ವಿವಿಯ ವಿಜ್ಞಾನ ಪದವೀಧರೆ, ಇಂಗ್ಲೀಷ್ ಮತ್ತು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಹಾಸನ ಜಿಲ್ಲೆಯ ಹೊಳೆನರಸೀಪುರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಬದುಕು ಆರಂಭ. ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಕೆ, ಸಾಹಿತ್ಯ ರಚನೆಯಲ್ಲಿ ಕೃಷಿ, ಸೂಳೆಕೆರೆ, ಕಾನನದ ಕಗ್ಗತ್ತಲ್ಲಿ, ಭಾಮತಿ ಮತ್ತಿತರ ನಾಟಕಗಳ ರಚನಕಾರರು, ಮಕ್ಕಳ ನಾಟಕಗಳ ನಿರ್ದೇಶಕರು, ಸಿಂಗಾಪೂರ, ಅಮೆರಿಕದ ಕ್ಯಾಲಿಫೋರ್ನಿಯಾದ ವಿವಿಯಲ್ಲಿ ಉಪನ್ಯಾಸ. ವಾಗ್ನಿಯೆಂದೇ ಜನಪ್ರಿಯ. ಪತ್ರಿಕೆಗಳ ಅಂಕಣಕಾರರಾಗಿಯೂ ಹೆಸರುವಾಸಿ, ನಿವೃತ್ತಿಯ ನಂತರ ಜಿ.ಆರ್.ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು. ಬಡವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ ಹೆಗ್ಗಳಿಕೆ. ಆಧ್ಯಾತ್ಮ ಚಿಂತನೆಯಿಂದಲೂ ಜನಮನ್ನಣೆ ಗಳಿಸಿರುವ ಗೀತಾರಾಮಾನಜುಂ ಅವರ ಸಾಧನೆಗೆ ನಾಟಕ ಅಕಾಡೆಮಿ ಪುರಸ್ಕಾರ, ವಿದ್ಯಾಧಾರಿಣಿ ಪ್ರಶಸ್ತಿ, ಡಿವಿಜಿ ಪ್ರಶಸ್ತಿ, ಇಂಡಿಯಾ ಯುನೆಸ್ಕೋ ಪುರಸ್ಕಾರ ಮತ್ತಿತರ ಗೌರವಗಳಿಗೆ ಪಾತ್ರರು.