Categories
ಕ್ರೀಡೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ದೇಚು ಮೂಲ

ಟೆನ್ನಿಸ್ ಕ್ರೀಡಾರಂಗದಲ್ಲಿ ಕರ್ನಾಟಕಕ್ಕೆ ಹೆಸರು ತಂದುಕೊಟ್ಟ ಪ್ರತಿಭಾವಂತೆ ಶ್ರೀಮತಿ ದೇಚು ಮೂಲ ಅವರು.

ಮಹಿಳಾ ಟೆನ್ನಿಸ್‌ನ ರಾಷ್ಟ್ರೀಯ ಚಾಂಪಿಯನ್ ಆಗಿ ಮೆರೆದು ವಿಂಬಲ್ಡನ್ ಪಂದ್ಯದ ಕ್ವಾರ್ಟರ್ ಫೈನಲ್‌ವರೆಗೂ ತಲುಪಿದ ಸಾಧನೆ ಇವರದು.

೧೯೪೧ರಲ್ಲಿ ಜನಿಸಿದ ದೇಚು ಅಪ್ಪಯ್ಯ ಮೂಲ ಅವರು ೧೯೫೯ನೆಯ ಇಸವಿಯಲ್ಲಿ ನಡೆದ ರಾಷ್ಟ್ರೀಯ ಟೆನ್ನಿಸ್ ಚಾಂಪಿಯನ್ ಷಿಪ್ ಸಿಂಗಲ್ಸ್ ಪ್ರಶಸ್ತಿ ವಿಜೇತರು. ೧೯೬೦, ೧೯೬೧, ೧೯೬೨ನೇ ಇಸವಿಯಲ್ಲಿ ಭಾರತದ ನಂ. ೧ ಬ್ಯಾಂಕಿನ ಮಹಿಳಾ ಟೆನ್ನಿಸ್ ಕ್ರೀಡಾಪಟುವೆಂಬ ಕೀರ್ತಿಗೆ ಭಾಜನರಾದರು.

2

೧೯೬೦ರ ದಶಕದಲ್ಲಿ ನಡೆದ ರಾಷ್ಟ್ರೀಯ ಟೆನ್ನಿಸ್ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿ ಸತತವಾಗಿ ೩ ಬಾರಿ ಪ್ರಥಮ ಸ್ಥಾನ ಪಡೆದು ‘ಟ್ರಿಪಲ್ ಕೌನ್’ ಪ್ರಶಸ್ತಿ ಗಳಿಸಿದ ಹಿರಿಮೆ ಇವರದು.

ಸಿಂಗಪೂರದಲ್ಲಿ ೧೯೬೧ರಲ್ಲಿ ನಡೆದ ಮಹಿಳೆಯರ ಮುಕ್ತ ಟೆನ್ನಿಸ್ ಸ್ಪರ್ಧೆಯಲ್ಲಿ ‘ರನ್ನರ್ ಅಪ್’ ಆಗಿ ಮೆರೆದ ಪ್ರತಿಭಾವಂತರು.

~

ಭಾರತದ ಕ್ರೀಡಾಕ್ಷೇತ್ರದಲ್ಲಿ ಸಾಧನೆಯ ಸುಧಾರಣೆಯಲ್ಲಿ ಅಷ್ಟೇನೂ ಅನುಕೂಲತೆಗಳಿಲ್ಲದ ದಿನಗಳಲ್ಲೇ ಸ್ವಂತ ಪರಿಶ್ರಮದಿಂದ ಅಂತರಾಷ್ಟ್ರೀಯ ಮಟ್ಟದಲ್ಲೂ ಮಿಂಚಿ ಮೆರೆದ ಅಪ್ರತಿಮ ಟೆನ್ನಿಸ್ ಕ್ರೀಡಾಪಟು ಕರ್ನಾಟಕದ ಶ್ರೀಮತಿ ದೇಚು ಮೂಲ ಅವರು.