Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪ್ರತಿಭಾ ನಾರಾಯಣ್

• ಅಭಿನಯದೊಂದಿಗೆ ರಂಗಗೀತೆಗಳನ್ನು ಸುಶ್ರಾವ್ಯವಾಗಿ ಭಾವಪೂರ್ಣವಾಗಿ ಹಾಡುವ ರಂಗಪ್ರತಿಭೆ ಶ್ರೀಮತಿ ಪ್ರತಿಭಾ ನಾರಾಯಣ್ ಅವರು.
ಬೆಂಗಳೂರಿನಲ್ಲಿ ೧೯೬೦ರಲ್ಲಿ ಶ್ರೀಮತಿ ಪ್ರತಿಭಾ ನಾರಾಯಣ್ ಅವರು ಜನಿಸಿದರು. ಶಾಸ್ತ್ರೀಯ ಸಂಗೀತ ಅಭ್ಯಸಿಸಿ ಹೈಸ್ಕೂಲಿನಲ್ಲಿರುವಾಗಲೆ ತಂದೆ ನಾಟಕ ಮಾಸ್ತರಾದ ಕೃಷ್ಣರಾವ್ ಅವರ ಆಸಕ್ತಿಯಿಂದಾಗಿ ಸದಾರಮೆ ನಾಟಕದ ಮೂಲಕ ರಂಗಭೂಮಿ ಪ್ರವೇಶ, ಧರ್ಮ ವಿಜಯ, ಕೃಷ್ಣಸಂಧಾನ ನಾಟಕಗಳ ದೌಪದಿ, ಕುಂತಿ, ಗಾಂಧಾರಿ, ಪ್ರಚಂಡ ರಾವಣ, ಸೀತೆ, ಮಂಡೋದರಿ, ಭಕ್ತ ಪ್ರಹ್ಲಾದದ ಕಯಾದು ಹೀಗೆ ವೈವಿಧ್ಯಮಯ ಪಾತ್ರಗಳ ಸಮರ್ಥ ನಿರ್ವಹಣೆ. ಚಲನಚಿತ್ರಗಳಲ್ಲೂ ಅಭಿನಯಿಸಿರುವ ಶ್ರೀಮತಿ ಪ್ರತಿಭಾ ನಾರಾಯಣ್ ಅವರು ೧೯೯೭ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ಶೇಷಾದ್ರಿ ನಾಟಕ ಮಂಡಳಿಯಲ್ಲಿ ರಂಗಭೂಮಿ ನಟಿಯಾಗಿ ಸಾವಿರಾರು ಪ್ರದರ್ಶನ ನೀಡಿ ಜನರ ಮೆಚ್ಚುಗೆ ಪಡೆದಿರುವ ಅಪೂರ್ವ ಕಲಾವಿದೆ ಮತ್ತು ಅದ್ಭುತ ಕಂಠಸಿರಿಯ ಗಾಯಕಿ ಪ್ರತಿಭಾ ನಾರಾಯಣ್ ಅವರು.