ಕಲಬುರಗಿ ಜಿಲ್ಲೆಯ ಅಳಂದ ಪಟ್ಟಣದ ಮಹಾದೇವಿ ಅಣ್ಣಾರಾವ ವಣದೆ ಬೇಸಾಯಗಾರರಿಗೆ ಮಾದರಿಯಾಗಿರುವ ಪ್ರಗತಿಪರ ರೈತಮಹಿಳೆ, ತೋಟಗಾರಿಕೆಯಲ್ಲಿ ಸಾಧನೆಗೈದ ಛಲದಂಕಮಲ್ಲೆ.
ಮಹಾದೇವಿ ಶಾಲೆಯ ಮೆಟ್ಟಿಲು ಹತ್ತಿದವರಲ್ಲ, ಕೃಷಿಯನ್ನೇ ನೆಚ್ಚಿ ಬದುಕಿದವರು. ಅಳಂದದಲ್ಲಿನ ೪೪ ಗುಂಟೆ ಜಮೀನಿನಲ್ಲಿ ಚಿನ್ನದ ಬೆಳೆ ತೆಗೆದ ಸಾಹಸಿ ಇವರು. ಅಲ್ಪ ಭೂಮಿಯಲ್ಲೇ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ತರಕಾರಿ, ಚೆಂಡು ಹೂ, ಗಲಾಡಿಯಾ ಹೂವ, ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ ಮುಂತಾದ ಬೆಳೆಗಳನ್ನು ಬೆಳೆದು ಭರ್ಜರಿ ಫಸಲು ತೆಗೆದ ನೇಗಿಲಯೋಗಿ, ತಾವು ಬೆಳೆದ ಹೂ, ದವಸಧಾನ್ಯಗಳನ್ನು ತಾವೇ ಖುದ್ದು ಮಾರಿ ಮಾರುಕಟ್ಟೆ ಸೃಷ್ಟಿಸಿಕೊಂಡವರು. ಹೈನೋದ್ಯಮದಲ್ಲೂ ಲಾಭದ ಸಾಧನೆಗೈದವರು. ೭೨ರ ಇಳಿವಯಸ್ಸಿನಲ್ಲೂ ಬೇಸಾಯದಲ್ಲಿ ತೊಡಗಿರುವ ಮಹಾದೇವಿ ಅಣ್ಣಾರಾವ ವಣದೆ ಅವರು ತೋಟಗಾರಿಕೆಯ ಶ್ರೇಷ್ಠ ಮಹಿಳೆ, ಉತ್ತಮ ರೈತಮಹಿಳೆ, ಮಹಿಳಾ ಸಾಧಕಿ ಮತ್ತಿತರ ಪ್ರಶಸ್ತಿ, ನಾಡಿನ ಗಣ್ಯಮಾನ್ಯರಿಂದ ಸನ್ಮಾನಗಳಿಂದ ಭೂಷಿತರು.
Categories