Categories
ಜಾನಪದ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಶಂಕ್ರಮ್ಮ ಮಹಾದೇವಪ್ಪಾ

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ರಾಮತೀರ್ಥದ ಜಾನಪದ ಪ್ರತಿಭೆ ಶಂಕ್ರಮ್ಮ ಮಹಾದೇವಪ್ಪಾ ಕನ್ನಡ ಮತ್ತು ತೆಲುಗು ಬುರಕಥೆ ಕಲಾವಿದರು. ದಶಕಗಳಿಂದಲೂ ಕಲಾಸೇವೆಯಲ್ಲೇ ಹೊಟ್ಟೆಹೊರೆಯುತ್ತಿರುವವರು.
ಬುಡ್ಗಜಂಗಮ ಸಮುದಾಯದ ಪಾರಂಪರಿಕ ಕಲೆಯಾದ ಬುರಕಥೆ ಶುದ್ಧ ಮೌಖಿಕ ಕಲೆ. ಈ ಕಲೆಯನ್ನು ಬಾಲ್ಯದಲ್ಲೇ ಕರಗತ ಮಾಡಿಕೊಂಡು ಹಳ್ಳಿಗಾಡಿನಲ್ಲಿ ಪ್ರದರ್ಶಿಸಿ ಬದುಕು ಕಟ್ಟಿಕೊಂಡವರು, ಹಳ್ಳಿಯ ಮನೆಯಂಗಳ, ಮದುವೆ ಮತ್ತಿತರ ಮಂಗಳ ಕಾರ್ಯಗಳು ಮತ್ತು ವೈಕುಂಠಯಾತ್ರೆಗಳೇ ಇವರ ಕಲಾಪ್ರದರ್ಶನದ ವೇದಿಕೆಗಳು. ರಾತ್ರಿಯಿಡೀ ರಂಜಕವಾಗಿ ಕಥೆ ಕೇಳುವ ಪರಿ ಕೇಳುಗರಿಗೆ ಅತ್ಯಾಕರ್ಷಕ. ಒಳ್ಳೆಯ ಕಥೆಗಾರ್ತಿಯೆಂದೇ ಜನಪ್ರಿಯ. ಇವರ ಕಥೆಗಳು ಧ್ವನಿಸುರಳಿಗಳಾಗಿದ್ದು ಅವುಗಳ ಅಧ್ಯಯನಕಾರರಿಗೆ ಪಿ.ಎಚ್.ಡಿ. ಸಹ ದೊರೆತಿರುವ ಹೆಗ್ಗಳಿಕೆ. ಜನಮನ್ನಣೆಯ ಜೊತೆಗೆ ಅವಿಶ್ರಾಂತ ಕಲಾಸೇವೆಗೆ ಹಲವು ಪ್ರಶಸ್ತಿ-ಗೌರವಗಳಿಗೂ ಪಾತ್ರರು.