ಕನ್ನಡ ರಂಗಭೂಮಿಯಲ್ಲಿ ನಟಿಯಾಗಿ, ನಾಟಕ ನಿರ್ದೇಶಕಿಯಾಗಿ ಜನಮನ್ನಣೆ ಗಳಿಸಿರುವ ಪ್ರತಿಭಾವಂತ ರಂಗಪ್ರತಿಭೆ ಶ್ರೀಮತಿ ಸರೋಜಮ್ಮ ಪಿ. ಧುತ್ತರಗಿ ಅವರು.
ಚಿಕ್ಕಂದಿನಲ್ಲಿಯೇ ರಂಗಭೂಮಿಗೆ ಪದಾರ್ಪಣೆ. ಗುಬ್ಬಿ ಕಂಪನಿ, ಸುಬ್ಬಯ್ಯ ನಾಯ್ಡು ಕಂಪನಿಯಲ್ಲಿ ಬಾಲ ನಟಿಯಾಗಿ ಅಭಿನಯ. ನಂತರ ಶಾರದಾ ನಾಟಕ ಮಂಡಳಿ, ಹಿರಣ್ಣಯ್ಯ ಮಿತ್ರ ಮಂಡಳಿ, ಹಲಗೇಲಿ ಜಟ್ಟೆಪ್ಪ ಕಂಪನಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯ, ಸಂಪತ್ತಿಗೆ ಸವಾಲ್, ಮಲಮಗಳು, ಕಿತ್ತೂರ ಚೆನ್ನಮ್ಮ, ಸಿಂಧೂರ ಲಕ್ಷ್ಮಣ ಮುಂತಾದ ಹಲವಾರು ಐತಿಹಾಸಿಕ, ಸಾಮಾಜಿಕ, ಧಾರ್ಮಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿರುವ ಶ್ರೀಮತಿ ಸರೋಜಮ್ಮ ಧುತ್ತರಗಿ ಅವರು ಆಕಾಶವಾಣಿ ಬಿ.ಹೈ, ಗ್ರೇಡ್ ಕಲಾವಿದೆ. ಸಂಗೀತ ಹಾಗೂ ನೃತ್ಯಕಲೆಗಳನ್ನು ಅಭ್ಯಾಸ ಮಾಡಿರುವ ಶ್ರೀಮತಿ ಸರೋಜಮ್ಮ ಧುತ್ತರಣ ಅವರು ರಂಗಗೀತೆಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲ ರಂಗ ಕಲಾವಿದೆ.
ಉತ್ತರ ಕರ್ನಾಟಕದ ಹೆಸರಾಂತ ನಾಟಕ ರಚನಕಾರರಾದ ಶ್ರೀ ಪಿ.ಬಿ. ಧುತ್ತರಗಿಯವರ ಪತ್ನಿಯಾಗಿ ಹದಿನಾಲ್ಕು ವರ್ಷಗಳಿಂದ ಶ್ರೀ ಅಭಿನವ ಕಲಾರಂಗ ನಾಟಕ ಕಂಪನಿಯನ್ನು ನಡೆಸಿಕೊಂಡು ಬರುತ್ತಿರುವ ಹಿಲಮೆಗೆ ಪಾತ್ರರು. ಶ್ರೀ ಪಿ.ಬಿ. ಧುತ್ತರಣಯವರ ಹಲವಾರು ನಾಟಕಗಳನ್ನು ನಿರ್ದೇಶನ ಮಾಡಿದ ಹೆಗ್ಗಳಿಕೆ, ನಾಟಕರಂಗದಲ್ಲಿ ಹೊಸಹೊಸ ರಂಗಪ್ರಯೋಗಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಮೂರ್ತಿಗೆ ಭಾಜನರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ನವರಸಗಳನ್ನು ಅದ್ಭುತವಾಗಿ ಅಭಿನಯಿಸಿ ಭಾವಪರವಶಗೊಆಸಬಲ್ಲ ಹಾಗೂ ಕನ್ನಡ ವೃತ್ತಿ ರಂಗಭೂಮಿಯ ಅಭಿಜಾತ ಕಲಾವಿದೆ ನಾಟ್ಯಕಲಾ ಸಂಗೀತರತ್ನ ಶ್ರೀಮತಿ ಸರೋಜಮ್ಮ ಧುತ್ತರಗಿ ಅವರು.
Categories
ಶ್ರೀಮತಿ ಸರೋಜಮ್ಮ ಪಿ. ಧುತ್ತರಗಿ
