Categories
ಚಲನಚಿತ್ರ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಹರಿಣಿ

ಕನ್ನಡ ಚಿತ್ರರಂಗದ ಆರಂಭದ ದಿನಗಳಲ್ಲೇ ತಾರೆಯಾಗಿ ದಾಖಲೆಗಳನ್ನು ನಿರ್ಮಿಸಿದ ಸ್ಪುರದ್ರೂಪಿ ಅಭಿನೇತ್ರಿ ಶ್ರೀಮತಿ ಹರಿಣಿ.
೧೯೪೫ರಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರೀಮತಿ ಹರಿಣಿಯವರು ಪ್ರಪ್ರಥಮವಾಗಿ ಜಗನ್ನೋಹಿನಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಕನ್ನಡದ ಜನಮನದಲ್ಲಿ ನೆಲೆನಿಂತವರು. ಕನ್ಯಾದಾನ, ಸೌಭಾಗ್ಯಲಕ್ಷ್ಮಿ, ನಂದಾದೀಪ, ನಾಂದಿ, ಸತಿ ಸುಕನ್ಯ, ಮಂಗಳ ಮುಹೂರ್ತ, ಮುಂತಾದವು ಕನ್ನಡ ಚಿತ್ರರಂಗದಲ್ಲಿ ದಾಖಲೆ ಸ್ಥಾಪಿಸಿದ ಚಿತ್ರಗಳು. ನಂದಾದೀಪ ಮತ್ತು ಮಂಗಳ ಮುಹೂರ್ತಕ್ಕೆ ರಾಷ್ಟ್ರಪ್ರಶಸ್ತಿಯೂ ಲಭಿಸಿತು. ಅವರ ಅಭಿನಯದ ನಾಂದಿ ಚಿತ್ರವು ವಿದೇಶದಲ್ಲಿ ತೆರೆಕಂಡ ಪ್ರಥಮ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.ಶ್ರೀಮತಿ ಹರಿಣಿ ಅವರ ಸಹೋದರ ವಾದಿರಾಜ್ ಕೂಡ ನಟ, ನಿರ್ಮಾಪಕ, ನಿರ್ದೇಶಕರಾಗಿದ್ದು ಅವರ ನಮ್ಮ ಮಕ್ಕಳು ಚಿತ್ರದಲ್ಲಿನ ಅಭಿನಯಕ್ಕೆ ಫಿಲಂಫೇರ್ ಪ್ರಶಸ್ತಿಯೂ ಶ್ರೀಮತಿ ಹರಿಣಿ ಅವರಿಗೆ ಸಿಕ್ಕಿತು.
ಡಾ. ವಿಜ್ಞಾನಿ ಬಿ.ಎಸ್. ರಾವ್ ಅವರನ್ನು ಮದುವೆಯಾಗಿ ಮಗನೊಂದಿಗೆ ಸುಖೀ ಕುಟುಂಬ ಹೊಂದಿರುವ ಹರಿಣಿ ಅವರ ಅಭಿನಯದ ಚಿತ್ರಗಳು ಇಂದಿಗೂ ಜನಮಾನಸದಲ್ಲಿ ಹಚ್ಚಹಸಿರಾಗಿವೆ.