Categories
ಜಾನಪದ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಹೊನ್ನಮ್ಮ

ಜನಪದ ಗೀತೆ-ಕಥೆಗಳ ಸಮೃದ್ಧ ಭಂಡಾರ, ಜಾನಪದ ವಿಶ್ವಕೋಶ ಶ್ರೀಮತಿ ಹೊನ್ನಮ್ಮ ಅವರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ಚಿನ್ನಾದೇವಿ ಅಗ್ರಹಾರದವರಾದ ಶ್ರೀಮತಿ ಹೊನ್ನಮ್ಮ ಜನಪದ ಕಥೆಗಳ ಲೋಕವನ್ನೇ ಬಿಚ್ಚಿಡಬಲ್ಲರು. ವಿವಿಧ ಆಚರಣೆಗಳು, ಸಂಪ್ರದಾಯ ನಂಬಿಕೆಗಳ ಬಗ್ಗೆ ಅಪಲಮಿತ ಜ್ಞಾನವುಳ್ಳ ಶ್ರೀಮತಿ ಹೊನ್ನಮ್ಮನವರು ಗಾದೆ-ಒಗಟುಗಳ ನಿಕ್ಷೇಪ; ಹೊಲದ ಸೊಪ್ಪು, ಕಾಳುಗಳನ್ನೇ ಬಳಸಿ ವೈವಿಧ್ಯಮಯ ಸಾರುಗಳನ್ನು ತಯಾಲಿಸುವ ಪಾಕತಜ್ಞೆ, ಜನಪದ ಹಾಡುಗಾಲಕೆ, ಮನೆಮದ್ದು, ಸೂಲುತ್ತಿ ಕಾರ್ಯ, ರಂಗೋಲಿ,-ಹೀಗೆ ಬಹುಮುಖ ಪ್ರತಿಭೆಗಳ ಆಗರ.
ಅಗೆದಷ್ಟೂ ಆಳ ಮೊಗೆದಷ್ಟೂ ಶ್ರೀಮಂತ ಜಾನಪದ ವಿವಿಧ ಪ್ರಕಾರಗಳನ್ನು ತೆರೆದಿಡಬಲ್ಲ ವಿಪುಲ ಜೀವನಾನುಭವವುಳ್ಳ ಇಆ ಹರೆಯದ ಶ್ರೀಮತಿ ಹೊನ್ನಮ್ಮನವರ ಜೀವನಗಾಥೆ ಗ್ರಾಮೀಣ ಸಾಂಸ್ಕೃತಿಕ ವರ್ಗದ ಅತ್ಯಪೂರ್ವ ಮಾದಲ. ಶ್ರೀಮತಿ ಹೊನ್ನಮ್ಮನವರ ಜನಪದಜ್ಞಾನಕ್ಕೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ಕನ್ನಡ ಸಾಹಿತ್ಯ ಪಲಷತ್ತಿನ ಪ್ರಶಸ್ತಿ, ಗೌರವ ಸಂದಿವೆ.
ಸನ್ಮಾನ-ಪ್ರಶಸ್ತಿ-ಪುರಸ್ಕಾರಗಳನ್ನು ಬಯಸದ “ಜಾನಪದ ಕಣಜ” ಶ್ರೀಮತಿ ಹೊನ್ನಮ್ಮ ಅವರು.