ನಿರಂತರವಾಗಿ ವಿವಿಧ ಸಂಘ-ಸಂಸ್ಥೆಗಳನ್ನು ಕಟ್ಟಿ ಸಮಾಜ ಸೇವೆಯಲ್ಲಿ ತೊಡಗಿರುವ ದಣಿವರಿಯದ ಕರ್ಮಯೋಗಿ ಶ್ರೀಮತ್ ಸ್ವಾಮಿ ಜಪಾನಂದಜಿ.
೧೯೫೮ರಲ್ಲಿ ಜನಿಸಿದ ಸ್ವಾಮೀಜಿಯವರು ಬಾಲ್ಯದಿಂದಲೇ ಅಧ್ಯಾತ್ಮದತ್ತ ಹೊರಳಿ ಮುಂದೆ ಶ್ರೀ ರಾಮಕೃಷ್ಣ ಆಶ್ರಮದ ಪ್ರಭಾವಕ್ಕೆ ಒಳಗಾಗಿ ಸ್ವಾಮಿ ವಿವೇಕಾನಂದರ ದಿವ್ಯಜೀವನ ಸಂದೇಶಗಳನ್ನು ಸಾರುವ ಬ್ರಹ್ಮಚಾರಿಯಾಗಿ ಉಳಿದರು. ೧೯೮೬ರಲ್ಲಿ ರಾಜ್ಯವು ಭೀಕರ ಬರಗಾಲಕ್ಕೆ ತುತ್ತಾದಾಗ ತುಮಕೂರು ಜಿಲ್ಲೆಯ ಪಾವಗಡ ಸುತ್ತಮುತ್ತ ನಲವತ್ತು ಸೇವಾ ಕೇಂದ್ರಗಳನ್ನು ತೆರೆದು ಜನಸೇವೆಯಲ್ಲಿ ತೊಡಗಿದರು. ಗ್ರಾಮೀಣ ಆರೋಗ್ಯ ಕೇಂದ್ರ, ಶ್ರೀ ಶಾರದಾದೇವಿ ಅಂಧತ್ವ ನಿವಾರಣಾ ಯೋಜನೆಗಳು ಇವರ ಸೇವೆಯ ಫಲಗಳು.
ಶಾಲಾ ಮಕ್ಕಳ ನೇತ್ರ ತಪಾಸಣಾ ಯೋಜನೆ, ಅನ್ನಪೂರ್ಣ ನಿಲಯ ಸ್ಥಾಪನೆ, ಆದರ್ಶ ದರ್ಶನ ಅನುಷ್ಠಾನ, ಹೀಗೆ ಅನೇಕ ಸಂಘ ಸಂಸ್ಥೆಗಳನ್ನು, ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಗ್ರಾಮೀಣ ಬಡಜನರಿಗೆ ಬೌದ್ಧಿಕ, ಆಧ್ಯಾತ್ಮಿಕ, ಶೈಕ್ಷಣಿಕ, ವೈದ್ಯಕೀಯ ಸೇವೆ ಒದಗಿಸುವ ನಿರಂತರ ಕಾಯಕದಲ್ಲಿ ತೊಡಗಿರುವ ಸರಳ ಚಿಂತಕ, ಸಮಾಜ ಸೇವಕ ಶ್ರೀಮತ್ ಸ್ವಾಮಿ ಜಪಾನಂದಜಿ ಅವರು.
Categories
ಶ್ರೀಮತ್ ಸ್ವಾಮಿ ಜಪಾನಂದಜ
