Categories
ಪತ್ರಿಕೋದ್ಯಮ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅಬ್ದುಲ್ ಖಾಅಕ್

ಕರ್ನಾಟಕದ ಉರ್ದು ಪತ್ರಿಕೋದ್ಯಮದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹೆಸರಾಂತ ಪತ್ರಕರ್ತರು ಶ್ರೀ ಅಬ್ದುಲ್ ಖಾಅತ್ ಅವರು. ಉರ್ದು ಪತ್ರಿಕೆಗಳಾದ ಸಾಲಾರ್, ಅಜಾದ್, ಆಲಮ್ಬರ್ದಾರ್ಗಳಲ್ಲಿ ಕೆಲಸ ಮಾಡಿರುವ ಅಬ್ದುಲ್ ಖಾಅಕ್ ಪ್ರಸ್ತುತ ಡೈಅಪಾಸ್ಬಾನ್ ಪತ್ರಿಕೆಯ ಮುಖ್ಯ ವರದಿಗಾರರು.
ಉರ್ದು ಪತ್ರಿಕೋದ್ಯಮದಲ್ಲಿ ಶೋಧನಾ ವರದಿಗೆ ಹೊಸ ಆಯಾಮ ನೀಡಿದ ಅಬ್ದುಲ್ ಖಾಅಕ್ ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ದೊರೆಯುವ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳ ಬಗ್ಗೆ ಜನತೆಯಲ್ಲಿ ಅಲವು ಮೂಡಿಸುವ ಹಲವಾರು ವರದಿಗಳನ್ನು ಮಾಡಿ ಪ್ರಸಿದ್ಧಿ ಪಡೆದ ಹೆಗ್ಗಆಕೆ ಶ್ರೀಯುತರದು.
ದುರ್ಬಲ ವರ್ಗದವರ ಏಳಿಗೆಗಾಗಿ ಸರ್ಕಾರ ಹಮ್ಮಿಕೊಂಡಿರುವ ಅನೇಕ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಲು ಲೇಖನಗಳನ್ನು ಬರೆದಿರುವ ಅಬ್ದುಲ್ ಖಾಅಕ್ ಅವರು ಅಲ್ಪಸಂಖ್ಯಾತ ಸಮಾಜದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳ ಒಳನೋಟಗಳನ್ನು ತಮ್ಮ ಬರವಣಿಗೆಯಲ್ಲಿ
ಮೂಡಿಸಿದವರು.
ಕರ್ನಾಟಕ ಉರ್ದು ಅಕಾಡೆಮಿಯಿಂದ ಅತ್ಯುತ್ತಮ ಉರ್ದು ಪತ್ರಿಕೋದ್ಯಮಿ ಸೇಲದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಅಬ್ದುಲ್ ಖಾಅಕ್ ಅವರು ಅಖಿಲ ಭಾರತ ಸ್ವಾಮಿ ತನ್ಜೀಮ್ ಸಂಸ್ಥೆಯ ಗೌರವವನ್ನು ಪಡೆದಿದ್ದಾರೆ.
ಉರ್ದು ಪತ್ರಿಕೋದ್ಯಮ ಹಾಗೂ ಸಾಹಿತ್ಯದಲ್ಲಿ ಅನುಪಮ ಸೇವೆ ಸಲ್ಲಿಸಿರುವ ಅಬ್ದುಲ್ ಖಾಅಕ್ ಅವರು ಹಲವಾರು ಮಾನವೀಯ ವರದಿಗಳನ್ನು ಮಾಡುವುದರ ಮೂಲಕ ಜನತೆಯ ಮನಗೆದ್ದಿದ್ದಾರೆ.