ಕ್ರೀಡಾ ಪದಕಗಳ ಖಜಾನೆಯನ್ನು ಸದಾ ಸೂರೆ ಮಾಡುವ ನಾಡಿನ ಹೆಮ್ಮೆಯ ಹಾಕಿ ಪಟು ಶ್ರೀ ಅರ್ಜುನ ಹಾಲಪ್ಪ, ಕನ್ನಡ ನಾಡಿನಲ್ಲಿ ಕ್ರೀಡೆ, ಸಾಹಸಗಳಿಗೆ ತವರೆನಿಸಿದ ಕೊಡಗು ಜಿಲ್ಲೆಯಲ್ಲಿ ೧೯೭೭ರಲ್ಲಿ ಜನಿಸಿದ ಶ್ರೀ ಅರ್ಜುನ ಹಾಲಪ್ಪ ಅವರು ಬಹುಬೇಗನೆ ರಾಷ್ಟ್ರಮಟ್ಟದಲ್ಲಿ ಮಿಂಚಿದ ಉತ್ಸಾಹಿ ಕ್ರೀಡಾಪಟು.
೧೯೯೯ರಲ್ಲಿ ಪೋಲೆಂಡ್ನಲ್ಲಿ ನಡೆದ ನ್ಯಾಷನಲ್ ಟೂರ್ನಮೆಂಟ್ನಲ್ಲಿ ಏಳು ಗೋಲು ಹೊಡೆದು ಭಾರತವನ್ನು ಫೈನಲ್ಗೆ ಒಯ್ದ ಹಾಲಪ್ಪ ೨೦೦೦ನೇ ಸಾಲಿನ ಜೂನಿಯರ್ ಏಷ್ಯಾ ಕಪ್ನಲ್ಲೂ ಗೋಲುಗಳ ಸುರಿಮಳೆಯೊಂದಿಗೆ ಭಾರತವನ್ನು ಫೈನಲ್ಗೆ ಕೊಂಡೊಯ್ದ ಅದ್ಭುತ ಕ್ರೀಡಾಪಟು.
ರಾಷ್ಟ್ರೀಯ ತಂಡದಲ್ಲಿ ಅತ್ಯಂತ ಪ್ರಮುಖ ಆಟಗಾರರಾಗಿರುವ ಶ್ರೀ ಅರ್ಜುನ ಹಾಲಪ್ಪ ಅವರು ಪದಕಗಳ ಮಾಲೆಯೊಂದಿಗೆ ಅರ್ಜುನ ಪ್ರಶಸ್ತಿಯನ್ನೂ ಕೊರಳಿಗೇರಿಸಿಕೊಂಡ ಶ್ರೀ ಅರ್ಜುನ ಹಾಲಪ್ಪ ಅವರಿಗೆ ೨೦೦೪ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯೆನಿಸುತ್ತದೆ.
Categories
ಶ್ರೀ ಅರ್ಜುನ ಹಾಲಪ್ಪ
