ಕನ್ನಡಿಗರಲ್ಲಿ ಸದಭಿರುಚಿಯ ಓದಿನ ಆಸಕ್ತಿಯನ್ನು ಹೆಚ್ಚಿಸುವ ಮೂಲಕ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿದವರು ಆರ್.ಎಸ್.ರಾಜಾರಾಮ್. ಕರ್ನಾಟಕದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ನವಕರ್ನಾಟಕ ಪಬ್ಲಿಕೇಷನ್ಸ್ನ ರೂವಾರಿ.
೧೯೪೧ರಲ್ಲಿ ಮಂಗಳೂರಿನಲ್ಲಿ ಜನಿಸಿದ ರಾಜಾರಾಮ್ ಅವರು ಇಂಟರ್ಮಿಡಿಯೇಟ್ಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಸಾಮಾಜಿಕ ಚಟುವಟಿಕೆಗಳಿಗೆ ಧುಮುಕಿದವರು. ಕಾರ್ಮಿಕ ನಾಯಕ ಬಿ.ವಿ.ಕಕ್ಕಿಲ್ಲಾಯರ ಮಾರ್ಗದರ್ಶನದಲ್ಲಿ ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯರಾದವರು. ೧೯೬೦ರಲ್ಲಿ ಸ್ಥಾಪನೆಗೊಂಡ ನವಕರ್ನಾಟಕ ಪಬ್ಲಿಕೇಷನ್ಸ್ನ ಆರಂಭಿಕ ದಿನಗಳಲ್ಲೇ ಸಹಾಯಕರಾಗಿದ್ದವರು ರಾಜಾರಾಮ್. ೬೫ರಲ್ಲಿ ನವಕರ್ನಾಟಕ ಸಂಸ್ಥೆಯ ‘ಜನಶಕ್ತಿ ಪ್ರಿಂಟರ್ಸ್’ ಸಂಸ್ಥೆಯ ‘ಜನಶಕ್ತಿ ಪ್ರಿಂಟರ್ಸ್’ ಮುದ್ರಣಾಲಯದ ವ್ಯವಸ್ಥಾಪಕರಾಗಿ, ಭಾರತ-ಸೋವಿಯತ್ ಸಾಂಸ್ಕೃತಿಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ದಶಕದ ಸೇವೆ. ವಿದ್ಯಾರ್ಥಿ ಯುವಜನ ಸಭಾದ ಸ್ಥಾಪನೆ. ೭೨ರಿಂದ ನವಕರ್ನಾಟಕ ಪಬ್ಲಿಕೇಷನ್ಸ್ನ ಪೂರ್ಣ ಹೊಣೆಗಾರಿಕೆ, ವಿಶ್ವಕಥಾಕೋಶ, ಕನ್ನಡ ಸಾಹಿತ್ಯ ಚರಿತ್ರೆ ಬೆಳವಣಿಗೆ, ನವಕರ್ನಾಟಕ ಜ್ಞಾನವಿಜ್ಞಾನ ಕೋಶ, ನವಕರ್ನಾಟಕ ಸಾಹಿತ್ಯ ಸಂಪದ ಮಾಲಿಕೆಯಡಿ ಹಲವು ಮಹತ್ವದ ಕೃತಿಗಳ ಪ್ರಕಟಣೆ. ಅತ್ಯುತ್ತಮ ಪ್ರಾದೇಶಿಕ ಪ್ರಕಾಶಕ ಸಂಸ್ಥೆ, ಅತ್ಯುತ್ತಮ ಪ್ರಕಾಶಕ ಪುರಸ್ಕಾರ ಮತ್ತಿತರ ಗೌರವಗಳಿಗೆ ಭಾಜನರು.
Categories