Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಎಂ. ಆರ್. ಬಾಳೆಕಾ

ವಾಸ್ತವ ನೆಲೆಯಲ್ಲಿ ಚಿತ್ರ ರಚಿಸುತ್ತ ಅದರಲ್ಲಿಯೇ ಪ್ರಯೋಗಶೀಲತೆ ತೋರುತ್ತ ಯಶಸ್ಸನ್ನು ಗಳಿಸಿದವರು ಶ್ರೀ ಎಂ. ಆರ್. ಬಾಳೆಕಾಯಿ ಅವರು.
ಬೆಳಗಾವಿಯ ಹೆಬ್ಬಾಳದಲ್ಲಿ ೧೯೪೧ರಲ್ಲಿ ಜನನ. ಎರಡನೇ ಬ್ಯಾಂಕ್ ಗಳಸಿ ಚಿತ್ರಕಲೆ ಮತ್ತು ವರ್ಣಚಿತ್ರದಲ್ಲಿ ಡಿಪ್ಲೊಮಾ; ಮೊದಲ ಬ್ಯಾಂಕ್ ಪಡೆದು ಚಿತ್ರಕಲಾ ಶಿಕ್ಷಕರಾಗಿ ತರಬೇತಿ ಹಾಗೂ ಆರ್ ಮಾಸ್ಟರ್ ಪದವಿ, ಗದಗಿನ ವಿಜಯ ಕಲಾ ಮಂದಿರ, ಧಾರವಾಡದ ಕಲಾಶಾಲೆ ಮತ್ತು ಭಾರತಿ ಕಲಾಕೇಂದ್ರದಲ್ಲಿ ವಿದ್ಯಾಭ್ಯಾಸ. ಬಾಣಾವರ, ಅಜ್ಜಂಪುರ, ಹಾಸನ, ತಲಕೆರೆ, ಹೆಬ್ಬಾಳ, ಬೆಂಗಳೂರು, ಧಾರವಾಡ, ಚಿಕ್ಕಮಗಳೂಲಿನಲ್ಲಿ ಏಕವ್ಯಕ್ತಿ ಕಲಾ ಪ್ರದರ್ಶನ. ಅರಸಿಕೆರೆ, ಧಾರವಾಡ, ಹುಬ್ಬಳ್ಳಿ, ಬೆಂಗಳೂರು, ಬಿಜಾಪುರ, ನವದೆಹಲಿಗಳಲ್ಲಿ ಸಮೂಹ ಚಿತ್ರ ಪ್ರದರ್ಶನವಲ್ಲದೆ, ಹಲವಾರು ವಸ್ತುಪ್ರದರ್ಶನ, ಕಾರ್ಯಾಗಾರಗಳಲ್ಲಿ ಭಾಗವಹಿಸುವಿಕೆ.
೧೯೬೭ರಲ್ಲಿ ಹಾಸನದ ಕಲೆ ಮತ್ತು ಕರಕುಶಲ ವಸ್ತುಪ್ರದರ್ಶನದಲ್ಲಿ ಮೊದಲ ಸ್ಥಾನ. ೧೯೬೯ರಲ್ಲಿ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಎರಡನೇ ಸ್ಥಾನ. ಮುಂತಾದ ಹಲವು ಬಹುಮಾನಗಳಲ್ಲದೆ, ಜಿಲ್ಲಾ ಮಟ್ಟದ ಉತ್ತಮ ಕಲಾಶಿಕ್ಷಕ ಪ್ರಶಸ್ತಿ, ಕರ್ನಾಟಕ ಲಂತಕಲಾ ಅಕಾಡೆಮಿ ವಾರ್ಷಿಕ ಕಲಾವಿದ ಪ್ರಶಸ್ತಿ, ಸೃಷ್ಟಿಶ್ರೀ ಪ್ರಶಸ್ತಿ ಪುರಸ್ಕೃತರು. ಶ್ರೀ ಎಂ. ಆರ್. ಬಾಳೆಕಾಯಿ ಅವರ ಚಿತ್ರಗಳು ಕರ್ನಾಟಕ ಲಲತಕಲಾ ಅಕಾಡೆಮಿ, ಮೈಸೂಲಿನ ಜನಪದ ಸಂಗ್ರಹಾಲಯ, ನವದೆಹಅಯ ರವೀಂದ್ರ ಕಲಾಗ್ಯಾಲಲ, ಧರ್ಮಸ್ಥಳ, ಸ್ಪಿಟ್ಟರ್ಲ್ಯಾಂಡ್, ಅಮೆಲಕ ಹೀಗೆ ಅನೇಕ ಸಂಗ್ರಹಾಲಯಗಳಲ್ಲವೆ.
ಹಲವಾರು ಕಲಾಸಂಸ್ಥೆಗಳಲ್ಲಿ, ಪ್ರಾತ್ಯಕ್ಷಿಕೆಗಳಲ್ಲಿ ಭಾಗವಹಿಸುವಿಕೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿನ ಶಿಲ್ಪಕಲಾ ಮತ್ತು ಚಿತ್ರಕಲಾ ವಿಭಾಗದಲ್ಲಿ ಅತಿಥಿ ಉಪನ್ಯಾಸಕ, ೨೦೦೨ರ ಕರ್ನಾಟಕ ರಾಜ್ಯ ಕೆ. ವೆಂಕಟಪ್ಪ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಹೀಗೆ ಹಲವಾರು ರೀತಿಯಲ್ಲಿ