ಕಳೆದ ಆರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಶ್ರೀ ಮತ್ತಿಹಳ್ಳಿ ನಾಗರಾಜರಾವ್ ಅವರು.
ಪತ್ರಿಕೋದ್ಯಮದ ಕುಟುಂಬದಲ್ಲಿ ಜನಿಸಿದ ಶ್ರೀ ಎಂ. ನಾಗರಾಜರಾವ್ ಅವರು ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದು ಅದು ಇಂದಿನ ಪತ್ರಿಕೋದ್ಯಮಕ್ಕೂ ಅನ್ವಯವಾಗುತ್ತದೆ. ರಾಜ್ಯದ ಭಾಷಾವಾರು ಪುನರ್ವಿಂಗಡಣೆ ಸಮಯದಿಂದ ಕರ್ನಾಟಕದ ಘಟನೆಗಳನ್ನು ರಾಷ್ಟ್ರೀಯ ಪತ್ರಿಕೆಗಳಲ್ಲಿ ವರದಿ ಮಾಡಿದವರು.
ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಆಡಳಿತಗಾರರು ಮತ್ತು ಸಂಶೋಧಕರಿಗೆ ಉಪಯುಕ್ತವಾಗುವಂಥ `ನ್ಯೂ ಡೆಲಿಡಾ ಆಫ್ ಕರ್ನಾಟಕ’ (೧೯೮೪-೧೯೮೭) ಕರ್ನಾಟಕಕ್ಕೆ ಸಂಬಂಧಪಟ್ಟ ಘಟನೆಗಳನ್ನು ದಾಖಲಿಸುವ ದಾಖಲೆಯ ಪತ್ರಿಕೆಯ ಹೊಸ ಸಾಹಸವನ್ನು ಪ್ರಾರಂಭಿಸಿದ್ದಾರೆ.
೩೦ ವರ್ಷಗಳ ಹಿಂದೆ ಜಗತ್ತಿನಾದ್ಯಂತ ಸಂಚರಿಸಿದ್ದು ಆ ಪ್ರವಾಸ ಸಾಹಿತ್ಯವನ್ನು ಬರೆಯುವುದರಲ್ಲಿ ತೊಡಗಿದ್ದಾರೆ. ಇಸ್ರೇಲ್ ಬಗ್ಗೆ ಒಂದು ಕನ್ನಡ ಪುಸ್ತಕವನ್ನು ಬರೆದಿದ್ದಾರೆ. ಸಂಯುಕ್ತ ಕರ್ನಾಟಕದೊಂದಿಗೆ ಕುಟುಂಬವು ಐದು ದಶಕಗಳಿಂದಲೂ ಹಾಗೂ ದಿ ಹಿಂದೂ ಪತ್ರಿಕೆಯಲ್ಲಿ ಏಳು ದಶಕಗಳಿಂದಲೂ ಸಂಪರ್ಕ ಹೊಂದಿದೆ. ಮದರಾಸು ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ ಸಂಯುಕ್ತ ಕರ್ನಾಟಕ, ಹುಬ್ಬಳ್ಳಿಯಲ್ಲಿ ವೃತ್ತಿಯನ್ನು ಆರಂಭಿಸಿದರು. ಸಹಾಯಕ ಸಂಪಾದಕರು,ರೆಸಿಡೆಂಟ್ ಸಂಪಾದಕರು ೧೯೮೧ರಲ್ಲಿ ನಿವೃತ್ತರಾಗಿದ್ದಾರೆ.
ಕೃಷಿಗಾಗಿ ವಿಶೇಷ ಪುಟ, ತೆರಿಗೆ ನಿರ್ಧರಣೆ, ಕೈಗಾರಿಕೆ, ಹಣಕಾಸು ಮತ್ತು ವಾಣಿಜ್ಯ, ಕಿಲಾಡಿ ಕಿಟ್ಟಿ’, ವ್ಯಂಗ್ಯಚಿತ್ರವನ್ನು ವಿಷಯಗಳ ಬಗೆಗಿನ ಚರ್ಚೆ, ೧೫ ಪುಟಗಳ ವಿಶೇಷ ಪುರವಣಿಯಲ್ಲಿ ತಂದ ಕೀರ್ತಿ ಶ್ರೀಯುತರದು. ಅಮೇರಿಕ ಸಂಯುಕ್ತ ಸಂಸ್ಥಾನ, ಇಸ್ರೇಲ್, ಸ್ವಿಟ್ಸರ್ಲೆಂಡ್, ತೈವಾನ್, ಇಟಲಿ ಮುಂತಾದ ರಾಷ್ಟ್ರಗಳಿಗೆ ಪ್ರವಾಸ ಮಾಡಿದ್ದಾರೆ.
ಇಂಗ್ಲಿಷ್ ಭಾಷೆಯಲ್ಲಿ ನಾಲ್ಕು ಕೃತಿಗಳನ್ನು ರಚಿಸಿರುವ ಶ್ರೀಯುತರಿಗೆ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಭಾರ್ಗವ ಪ್ರಶಸ್ತಿ, ಸಂದೇಶ ಫೌಂಡೇಷನ್ ಜರ್ನಲಿಸಂ ಪ್ರಶಸ್ತಿಗಳು ದೊರೆತಿದೆ. ಪತ್ರಿಕೋದ್ಯಮದಲ್ಲಿ ನಾವಿನ್ಯತೆಯನ್ನು ಹಾಗೂ ವಿಶೇಷ ಅಂಕಣಗಳನ್ನು ಪ್ರಾರಂಭಿಸಿದ ಹೆಗ್ಗಳಿಕೆಗೆ ಪಾತ್ರರು ಶ್ರೀ ಎಂ. ನಾಗರಾಜರಾವ್ ಅವರು.
Categories
ಶ್ರೀ ಎಂ. ನಾಗರಾಜ್ರಾವ್
