Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಎನ್. ಶಂಕರನಾರಾಯಣಚಾರ

ಶಿಲ್ಪಕಲೆಯ ಭವ್ಯ ಪರಂಪರೆಯನ್ನು ಉಳಿಸಿ, ಬೆಳೆಸುತ್ತಿರುವ, ಶಿಲ್ಪಕಲಾ ಕ್ಷೇತ್ರದಲ್ಲ
ಅದ್ಭುತ ಸಾಧನೆ ಮಾಡಿರುವ ಅಪೂರ್ವ ಕಲಾವಿದರು ಶ್ರೀ ಎಸ್. ಶಂಕರನಾರಾಯಣ
೧೯೩೦ರಲ್ಲಿ ಶಿಲ್ಪಗ್ರಾಮವೆನಿಸಿದ ಶಿವಾರಪಟ್ಟಣದಲ್ಲಿ ಜನನ, ಪ್ರಸಿದ್ಧ ಕಲಾವಿದರಾದ ಸುಜ್ಞಾನಮೂರ್ತಾಚಾರರ ಮಗನಾ? ತಂದೆಯಿಂದಲೇ ಕಲೆಯಲ್ಲಿ ಮಾರ್ಗದರ್ಶನ, ನಂತರ ಬೆಂಗಳೂಲಿನ ಲೀಜನಲ್ ಸೆಂಟರ್ನಲ್ಲಿ ಹೆಚ್ಚಿನ ತರಬೇತಿ. ಪ್ರಸಕ್ತ ಶಿವಾರಪಟ್ಟಣದಲ್ಲಿ ಸಕ್ರಿಯವಾಗಿ ಶಿಲ್ಪರಚನೆ ಮಾಡುತ್ತಿರುವ ಕಲಾವಿದರು.
ಶ್ರೀ ಎಸ್. ಶಂಕರನಾರಾಯಣಚಾರ್ ಅವರ ಕೃತಿಗಳು ಲಂಡನ್, ಅಮೆಲಕ, ಜರ್ಮನ್ ಸೇಲದಂತೆ ಭಾರತಾದ್ಯಂತ ಹಲವಾರು ಸ್ಥಳಗಳಲ್ಲಿ ಸಂಗ್ರಹಿತವಾಗಿವೆ. ದೇವಾನುದೇವತೆಗಳ ಶಿಲ್ಪಗಳಲ್ಲದೆ ಶಿಲಾಬಾಲಿಕೆ, ಭಾವಶಿಲ್ಪ ಮುಂತಾದ ಶಿಲ್ಪಗಳ ರಚನೆಯಲ್ಲೂ ಪರಿಣತರು.
ರಾಷ್ಟ್ರೀಯ ಪ್ರಶಸ್ತಿ, ಅಖಿಲ ಭಾರತ ಕಲೆ ಮತ್ತು ಕರಕುಶಲ ಕಲಾ ಸೊಸೈಟಿಯ ಪ್ರಶಸ್ತಿ, ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ, ಇಂದಿರಾಗಾಂಧಿ ಶಿರೋಮಣಿ ಪ್ರಶಸ್ತಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೆ ಭಾಜನರು. ಕರ್ನಾಟಕ ಲಲತಕಲಾ ಅಕಾಡೆಮಿ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಕೆ.
ದೆಹಲಿ, ಹಲಯಾಣ, ಮುಂಬಯಿ, ಕೊಲ್ಕತ್ತಾ, ನಾಗಪುರ, ಗ್ವಾಲಿಯರ್, ಇಂದೋರ್, ಜಯಪುರ, ವಾರಂಗಲ್, ವಿಜಯವಾಡ, ಮಹಾಬಲಪುರ, ಅಗ್ರಾ, ಪಂಜಾಬ್ ಮುಂತಾದ ಸ್ಥಳಗಳಲ್ಲಿ ನಡೆದ ಕಲಾಮೇಳ ಹಾಗೂ ಕಲಾಶಿರದಲ್ಲಿ ಸಕ್ರಿಯ ಭಾಗವಹಿಸುವಿಕೆ.