ಹೊರನಾಡ ಕನ್ನಡಿಗರೆನ್ನಿಸಿಕೊಂಡು, ಕರ್ನಾಟಕದ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ ಶ್ರೀ ಎಸ್. ಎಂ. ಸೈಯದ್ ಖಲೀಲ್
ಅವರು.
ಭಟ್ಕಳದಲ್ಲಿ ಜನಿಸಿದ ಶ್ರೀಯುತರು ತಮಿಳುನಾಡಿನ ಚೆನ್ನೈ ಲಾಯಲಾ ಕಾಲೇಜಿನಲ್ಲಿ ಚಾರ್ಟಡ್್ರ ಅಕೌಂಟೆನ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ೧೯೬೫ರಲ್ಲಿ ಚಾರ್ಟಡ್್ರ ಅಕೌಂಟೆಂಟ್ ಅರ್ಹತೆ ಪಡೆದು ಭಾರತದ ಪ್ರತಿಷ್ಠಿತ ಇನ್ಸ್ಟಿಟ್ಯೂಟ್ ಆಫ್ ಚಾರ್ಟಡ್್ರ ಅಕೌಂಟೆಂಟ್ಸ್ನ ಫೆಲೋ ಸದಸ್ಯರಾದರು.
ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಆರ್ಥಿಕ ನಿರ್ವಾಹಕರಾಗಿ ವೃತ್ತಿಯನ್ನಾರಂಭಿಸಿ ನಿರ್ದೇಶಕರ ತನಕ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಪ್ರಸ್ತುತ ಐ ಮತ್ತು ಎಂ ಗಲಾದ್ರಿ ಗ್ರೂಪ್ನ ಕಾರ್ಯಕಾರಿ ನಿರ್ದೇಶಕರಾಗಿದ್ದಾರೆ. ಅಲ್ಲದೆ ಮಾಧ್ಯಮ ಕಮ್ಯೂನಿಕೇಷನ್ಸ್ ನಿಯಮಿತದ ಅಧ್ಯಕ್ಷರಾಗಿ ಮಲಬಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಮತ್ತು ಪ್ರವರ್ತಕರಾಗಿ ಇಂಡಿಯಾ ಪಬ್ಲಿಕೇಷನ್ನಿನ ನಿರ್ದೇಶಕರಾಗಿ ಉರ್ದು ವಾರ್ತಾ ಛಾನಲ್ ಫಲಾಕ್ ಟಿ.ವಿ.ಯ ನಿರ್ದೆಶಕರಾಗಿ ಸೇವೆ ಸಲ್ಲಿಸಿದ್ದಾರೆ. ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೈಯದ್ ಖಲೀಲ್ ಅವರು ಕರ್ನಾಟಕದ ಸುಪ್ರಸಿದ್ಧ ಕಲಾವಿದರು, ಸಾಹಿತಿಗಳು, ರಾಜಕಾರಣಿಗಳನ್ನು ದುಬೈಗೆ ಕರೆಸಿಕೊಂಡು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿಚಾರ ಸಂಕಿರಣ ಏರ್ಪಡಿಸಿ ಅನಿವಾಸಿ ಭಾರತೀಯರು ಕರ್ನಾಟಕದಲ್ಲಿ ಬಂಡವಾಳ ಹೂಡಲು ಪ್ರಚೋದನೆ ನೀಡಿದ್ದಾರೆ.
ಭಟ್ಕಳದಲ್ಲಿ ಅಂಜುಮುನ್ ಶೈಕ್ಷಣಿಕ ಸಂಘದ ಗೌರವ ಪೋಷಕರಾಗಿರುವ ಶ್ರೀಯುತರು ಅನೇಕ ಸಮಾಜ ಸೇವಾ ಸಂಸ್ಥೆಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಉದ್ಯೋಗಾರ್ಥಿಗಳಿಗೆ ನೆರವು, ಕುಡಿಯುವ ನೀರಿನ ಪೂರೈಕೆ, ವೈದ್ಯಕೀಯ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ ಇತ್ಯಾದಿಗಳನ್ನು ಏರ್ಪಡಿಸುತ್ತಿದ್ದಾರೆ. ದಂಗೆ, ಭೂಕಂಪ, ಪ್ರವಾಹಗಳಲ್ಲಿ ಸಂತ್ರಸ್ತರಿಗೆ ಧನಸಹಾಯ ನೀಡುವ ಮೂಲಕ ನೆರವಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸಿಕೊಡುವಲ್ಲಿ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ನಿಸ್ವಾರ್ಥವಾಗಿ ದುಡಿಯುವಲ್ಲಿ ತನ್ಮಯರಾಗಿರುವವರು ಎಸ್. ಎಂ. ಸೈಯದ್ ಖಲೀಲ್.
Categories
ಶ್ರೀ ಎಸ್.ಎಂ. ಸೈಯದ್ ಖಲೀಲ್
