Categories
ರಂಗಭೂಮಿ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್.ಎನ್.ರಂಗಸ್ವಾಮಿ

ಕನ್ನಡ ವೃತ್ತಿರಂಗಭೂಮಿಯಲ್ಲಿ ನಟ, ನಿರ್ದೇಶಕ ಮತ್ತು ನಾಟಕಕಾರರಾಗಿ ವಿಶಿಷ್ಟ ಛಾಹೊತ್ತಿದವರು ಎಸ್.ಎನ್.ರಂಗಸ್ವಾಮಿ, ಐವತ್ತು ವರ್ಷಗಳ ಸುದೀರ್ಘ ರಂಗಸೇವೆಗೈದ ಸಾಧಕರು. ವೃತ್ತಿಯಲ್ಲಿ ಕ್ಷೌರಿಕ, ಪ್ರವೃತ್ತಿಯಲ್ಲಿ ರಂಗಕರ್ಮಿ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಚಿರಡೋಣಿ ಗ್ರಾಮದಲ್ಲಿ ನೆಲೆಸಿರುವ ಎಸ್.ಎನ್.ರಂಗಸ್ವಾಮಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ್ದು ನಟನಾಗಿ. ಆನಂತರ ನಾಟಕ ನಿರ್ದೇಶನ-ರಚನೆಗೆ ವಿಸ್ತಾರ. ದುಡುಕಿ ಹೋದ ಮಗ, ಹುಡುಕಿ ಬಂದ ಸೊಸೆ, ಶೀಲಕೊಟ್ಟರೂ ಸೊಳೆಯಲ್ಲ, ಕೊರಳೊಂದು ತಾಳಿ ಎರಡು, ಹುಡುಗಿ ಮೆಚ್ಚಿದ ಹುಂಬ, ಶಿಕ್ಷಣ ನಮ್ಮ ರಕ್ಷಣೆ ಮುಂತಾದವು ರಂಗಸ್ವಾಮಿ ರಚಿತ ನಾಟಕಗಳು. ವೃತ್ತಿರಂಗಭೂಮಿಯಲ್ಲಿ ಹೆಸರಾದ ಕೆ.ಬಿ.ಆರ್.ಡ್ರಾಮಾ ಕಂಪನಿ, ಗಜಾನನ ಡ್ರಾಮಾ ಕಂಪನಿ ಇನ್ನಿತರ ಕಂಪನಿಗಳು ಇವರ ನಾಟಕಗಳನ್ನು ನೂರಾರು ಹಳ್ಳಿಗಳಲ್ಲಿ ಪ್ರದರ್ಶಿಸಿವೆ. ಪ್ರೇಕ್ಷಕರ ಚಪ್ಪಾಳೆಯೇ ಪ್ರಶಸ್ತಿಯೆಂದು ಭಾವಿಸಿ ರಂಗಬದ್ಧತೆಯಿಂದ ಬಾಳ್ವೆ ಮಾಡಿರುವ ರಂಗಸ್ವಾಮಿ ಅವರ ರಂಗಸಾಧನೆ ಕುರಿತು ಪತ್ರಿಕೆಗಳಲ್ಲಿ ಹತ್ತಾರು ಲೇಖನಗಳು ಪ್ರಕಟಗೊಂಡು ಸಾರ್ಥಕತೆಯ ಭಾವ ತಂದಿದೆ.