Categories
ಚಲನಚಿತ್ರ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್. ರಾಮಚಂದ್ರ

ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರವಾದ ಬಹುತೇಕ ಕನ್ನಡ ಚಿತ್ರಗಳಿಗೆಲ್ಲ ಛಾಯಾಗ್ರಾಹಕರಾಗಿ ಎಸ್.ರಾಮಚಂದ್ರ ದುಡಿದಿದ್ದಾರೆ ಎಂಬ ಮಾತು ಅವರ ಕ್ರಿಯಾಶೀಲ ಛಾಯಾಗ್ರಹಣಕ್ಕೆ ಅರ್ಹವಾಗಿಯೆ ಸಂದ ಮೆಚ್ಚುನುಡಿ.
ಬಿ.ಎಸ್.ಸಿ. ಪದವೀಧರರಾಗಿ ಸಿನಿಮಾ ಡಿಪ್ಲೊಮಾ ಪಡೆದಿರುವ ಶ್ರೀಯುತ ರಾಮಚಂದ್ರ ಅವರು ಋಷ್ಯಶೃಂಗ, ಸಂಕಲ್ಪ, ಕಂಕಣ, ಮನೆ, ಮಾಲ್ಗುಡಿ ಡೇಸ್, ಈ ಎಲ್ಲ ಚಿತ್ರಗಳ ಛಾಯಾಗ್ರಹಣಕ್ಕಾಗಿ ಪ್ರಶಸ್ತಿ ಪಡೆದವರು. ಇವರ ಛಾಯಾಗ್ರಹಣದ ಚೋಮನದುಡಿ, ಘಟಶ್ರಾದ್ಧ, ಗ್ರಹಣ, ಪಲ್ಲವಿ, ದಂಗೆ ಎದ್ದ ಮಕ್ಕಳು, ಆಸ್ಫೋಟ, ಶಿಶುನಾಳ ಶರೀಫ, ಅಲೆಮಾರಿ, ಪ್ರವಾಹ, ಕಾನೂರು ಹೆಗ್ಗಡತಿ, ಒಂದು ಕೊಲೆಯ ಸುತ್ತ, ಋಷ್ಯಶೃಂಗ ಈ ಎಲ್ಲ ಚಿತ್ರಗಳು ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿವೆ ಎಂಬುದು ಹೆಮ್ಮೆಯ ವಿಷಯ.
ಈವರೆಗೂ ಎಂಬತ್ತಕ್ಕೂ ಹೆಚ್ಚು ಚಲನಚಿತ್ರಗಳಿಗೆ ಛಾಯಾಗ್ರಾಹಕರಾಗಿ ದುಡಿದಿರುವ ಶ್ರೀ ಎಸ್. ರಾಮಚಂದ್ರ ಅವರು ಕನ್ನಡದ ಕಲಾತ್ಮಕ ಚಿತ್ರಗಳಿಗೆ ತಮ್ಮ ಅತ್ಯುತ್ತಮ ಛಾಯಾಗ್ರಹಣದಿಂದಲೆ ವಿಶಿಷ್ಟವಾದ ಹೊಳಪು ನೀಡಿದ ಅಪರೂಪದ ತಂತ್ರಜ್ಞ