Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಕೇಶವ ಜೋಗಿತಾಯ

ತಂತ್ರವಿದ್ಯೆ ಮತ್ತು ಆಧ್ಯಾತ್ಮಿಕ ವಿದ್ಯೆಯಲ್ಲಿ ಪರಿಣತರಾಗಿ ಜನಸೇವೆ ಮಾಡುತ್ತಿರುವವರು ಶ್ರೀ ಕೇಶವ ಜೋಗಿತ್ಯಾಯ ಅವರು.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಗ್ರಾಮದಲ್ಲಿ ಜನನ. ತಂದೆ ಶ್ರೀ ಶ್ರೀ ರಾಮ ಜೋಗಿತ್ಯಾಯ ಪ್ರೌಢ ಶಿಕ್ಷಣದ ನಂತರ ಆಧ್ಯಾತ್ಮಿಕ ವೃತ್ತಿಯ ಅವಲಂಬನ, ತಂತ್ರವಿದ್ಯೆ ಮತ್ತು ಆಧ್ಯಾತ್ಮಿಕ ವಿದ್ಯೆಗಳಲ್ಲಿ ಪರಿಣಿತರಾಗಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಶಾಲೆ ನಡೆಸಿಕೊಂಡು ಬರುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಮುಖ್ಯತಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಧಾರ್ಮಿಕ ಪ್ರವೃತ್ತಿಯ ಹಾಗೂ ಉನ್ನತವಾದ ಆಧ್ಯಾತ್ಮಿಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಹಂಚುತ್ತಿರುವವರು ಶ್ರೀ ಕೇಶವ ಜೋಗಿತ್ಯಾಯ
ಅವರು.