Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಗಂಗಾಧರ (ಗುರು ಟೀಕ್)

ರಾಜ್ಯದ ಸಾವಿರಾರು ಎಕರೆ ಬರಡು ಪ್ರದೇಶಗಳಲ್ಲಿ ಗಿಡಮರಗಳನ್ನು ನೆಟ್ಟು, ಹಸಿರ ಹರಿಕಾರರಾಗಿರುವವರು ಶ್ರೀ ಗಂಗಾಧರ ಅವರು.
ರೈತ ಕುಟುಂಬದ ಹಿನ್ನೆಲೆಯಲ್ಲಿ ಹಂತಹಂತವಾಗಿ ಪ್ರವರ್ಧಮಾನಕ್ಕೆ ಬಂದು ಗಿಡಮರ ಬೆಳೆಸುವ ಗುರು ಟೀಕ್ ಇನ್ವೆಸ್ಟ್ಮೆಂಟ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಹುಟ್ಟು ಹಾಕಿದವರು. ಪ್ರಾರಂಭದಲ್ಲಿ ಹಾಸನ ಜಿಲ್ಲೆಯ ಟಿ. ಕೊಪ್ಪಲು ಗ್ರಾಮದಲ್ಲಿ ಟೀಕ್ ಗಿಡಗಳನ್ನು ಬೆಳೆಸಲು ಪ್ರಾರಂಭಿಸಿದ ಶ್ರೀಯುತರು ಇಂದು ೨೭ ಜಿಲ್ಲೆಗಳಲ್ಲೂ ಕಚೇರಿಗಳನ್ನು ತೆರೆದು ಮೈಸೂರು, ಮಂಡ್ಯ, ಬೆಂಗಳೂರು, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಟೀಕ್ ಪ್ಲಾಂಟೇಶನ್ ಪ್ರಾರಂಭಿಸಿದ್ದಾರೆ. ತಮ್ಮ ಸಂಸ್ಥೆಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾವಂತ/ಅವಿದ್ಯಾವಂತ ಜನಕ್ಕೆ ಉದ್ಯೋಗ ನೀಡಿದ್ದಾರೆ.
ಶಾಲಾ ಕಾಲೇಜು ಮಕ್ಕಳಿಗೆ ಚಿತ್ರರಚನಾ ಸ್ಪರ್ಧೆ, ಬೃಹತ್ ರಕ್ತದಾನ ಶಿಬಿರ, ಸ್ವಚ್ಛ ಗ್ರಾಮ ಯೋಜನೆ, ಕೆರೆಹೂಳು ತೆಗೆಸುವಿಕೆ ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕರುನಾಡ ಸಂಜೆ ಮತ್ತು ಸೂರ್ಯೋದಯ ದಿನ ಪತ್ರಿಕೆಗಳ ಸ್ಥಾಪನೆ ಇವರ ಪತ್ರಿಕೋಧ್ಯಮದ ಸಾಧನೆಗಳು.