ಅತ್ಯುತ್ತಮ ಪತ್ರಿಕಾ ಛಾಯಾಗ್ರಾಹಕರು ಶ್ರೀ ಗುಲಾಂ ಮಂಟಕ್ ಅವರು.
೧೯೩೯ರಲ್ಲಿ ಬೀದರಿನಲ್ಲಿ ಜನನ. ಛಾಯಾಗ್ರಹಣವನ್ನು ಬಾಲ್ಯದಿಂದಲೇ ತಂದೆ ಗುಲಾಮ್ ಮುಸ್ತಫ ಅವರಲ್ಲಿ ಕಲಿತರು. ಶ್ರೀ ಗುಲಾಂ ಮಂಟಕ್ ಅವರು ವೃತ್ತಿಯನ್ನಾರಂಭಿಸಿದಾಗ ಛಾಯಾಚಿತ್ರವನ್ನು ಡೆವಲಪ್ ಮಾಡಲು ಬೀದರ್ ನಲ್ಲಿ ವಿದ್ಯುಚ್ಛಕ್ತಿಯೂ ಇರಲಿಲ್ಲ. ಡೆವಲಪ್ ಮಾಡುವ ಕೆಲಸವನ್ನು ಲ್ಯಾಟೀನು ಬೆಳಕಿನಲ್ಲಿಯೂ ಮತ್ತು ಫೋಟೋ ಎನ್ಲಾರ್ಜ್ ಮಾಡುವುದನ್ನು ಸೂರ್ಯನ ಬೆಳಕಿನಲ್ಲಿಯೂ ಮಾಡುವ ಪರಿಸ್ಥಿತಿ. 0 ಡಿಗ್ರಿಯಿಂದ ೧೮೦ ಡಿಗ್ರಿಯವರೆಗೆ ಛಾಯಾಚಿತ್ರ ತೆಗೆಯುವ ವಿವಿಧ ರೀತಿಯ ಹೊಸ ಮತ್ತು ಹಳೆಯ ಕ್ಯಾಮರಾಗಳನ್ನು ಸಂಗ್ರಹಿಸಿ ಸರ್ಕ್ಯೂಟ್ ಕ್ಯಾಮರಾಗಳಂತೆ ಕೆಲಸ ಮಾಡುವ ಹಾಗೆ ರೂಪಿಸುತ್ತಿದ್ದರು. ಹಾಗೂ ೦ ಡಿಗ್ರಿಯಿಂದ ೩೬೦ ಡಿಗ್ರಿವರೆಗೆ ಛಾಯಾಚಿತ್ರ ತೆಗೆಯಲು ಈ ಸರ್ಕ್ಯೂಟ್ ಕ್ಯಾಮರಾಗಳನ್ನು ಮಾರ್ಪಡಿಸಲು ಪ್ರಯತ್ನಿಸುತ್ತಿದ್ದರು. ಈ ತಂತ್ರ ಕೌಶಲದಿಂದ ಶ್ರೀ ಗುಲಾಂ ಮಂಟಕ್ ಅವರು ಕೆಲವು ವಿಶಿಷ್ಟ ಛಾಯಾಚಿತ್ರಗಳನ್ನು ತೆಗೆದ ಹಿರಿಮೆಗೆ ಪಾತ್ರರು.
ಛಾಯಾಚಿತ್ರ ಇತಿಹಾಸದಲ್ಲಿ ಮುಂಬಯಿಯ ರಸ್ತೆ, ಸಮುದ್ರದ ಭಾಗ, ಗೇಟ್ ವೇ ಆಫ್ ಇಂಡಿಯಾ, ತಾಜಮಹಲ್ ಹೋಟೆಲು ಒಳಗೊಂಡಂತೆ ಸ್ವಾಮಿ ವಿವೇಕಾನಂದರ ಪ್ರತಿಮೆಯಿಂದ ಹಿಡಿದು ಶಿವಾಜಿ ಪ್ರತಿಮೆಯವರೆಗೆ ಒಂದೇ ಸಲಕ್ಕೆ ತೆಗೆದ ಛಾಯಾಚಿತ್ರ ಅತ್ಯಂತ ದೀರ್ಘ ಛಾಯಾಚಿತ್ರವಾಗಿದೆ.
ಕ್ಯಾಮರಾಗಳ ದುರಸ್ತಿ ಕಾರ್ಯವನ್ನು ಆರಂಭಿಸಲು ವಾರ್ತಾ ಇಲಾಖೆಯ ಪತ್ರಿಕಾ ಛಾಯಾಗ್ರಾಹಕರಾಗಿ ನಾಮ ನಿರ್ದೇಶನಗೊಂಡಾಗ ಕ್ಯಾಮರಾ ತಂತ್ರಜ್ಞಾನದ ಬಗ್ಗೆ ಹೆಚ್ಚೆಚ್ಚು ಅರಿಯಲು ಸಾಧ್ಯವಾಯಿತು.
ಛಾಯಾಗ್ರಹಣ ತಂತ್ರಜ್ಞಾನದಲ್ಲಿ ಅಪಾರ ಕೌಶಲವುಳ್ಳ ಅನನ್ಯ ಛಾಯಾಗ್ರಾಹಕ ಗುಲಾಂ ಮಂಟಕ್ ಅವರು.
Categories
ಶ್ರೀ ಗುಲಾಂ ಮಂಬಕ್
