ಯಕ್ಷಗಾನ ಪ್ರಪಂಚದ ಚಂಡೆ-ಮದ್ದಳೆ ಭಾಗವತಿಕೆಯಲ್ಲಿ ಸಾವಿರ ಸಾವಿರ ಶಿಷ್ಯರನ್ನು ತಯಾರು ಮಾಡಿರುವ ಅಪೂರ್ವ ಗುರು ಶ್ರೀ ಗೋಪಾಲಕೃಷ್ಣ ಕುರುಪ್ ಅವರು.
ಆರು ದಶಕಗಳಿಂದ ಯಕ್ಷಗಾನ ಜಗತ್ತಿನಲ್ಲಿ ಶಿಷ್ಯನಾಗಿ, ಭಾಗವತನಾಗಿ, ಚಂಡೆ ಮದ್ದಳೆ ವಾದಕನಾಗಿ ಮುಮ್ಮೇಳದ ನಾಟ್ಯವನ್ನೂ ಬಲ್ಲವರಾಗಿ ಹೆಸರು ಮಾಡಿರುವುದು ಗೋಪಾಲಕೃಷ್ಣ ಕುರುಪ್ ಅವರ ಹೆಗ್ಗಳಿಕೆ.
ದಕ್ಷಿಣ ಕನ್ನಡದ ಬರ್ಗುಳದವರಾದ ಗೋಪಾಲಕೃಷ್ಣ ಕುರುಪ್ ಐದನೇ ತರಗತಿಯವರೆಗೆ ಮಾತ್ರ ಓದಿ ಯಕ್ಷಗಾನದಲ್ಲಿ ಆಸಕ್ತರಾದರು. ಬಲಿಪ ನಾರಾಯಣ ಭಾಗವತ, ಕುದ್ರೆಕೋಡು ರಾಮಭಟ್, ನಾರಂಪಾಡಿ ಸುಬ್ಬಯ್ಯ ಶೆಟ್ಟಿ ಮುಂತಾದವರ ಬಳಿ ಶಿಷ್ಯರಾಗಿದ್ದು ಯಕ್ಷಗಾನವನ್ನು ಅರಿತುಕೊಂಡ ಶ್ರೀ ಕುರುಪ್ ಮೊದಲು ಸ್ತ್ರೀ ವೇಷ ಕಟ್ಟುತ್ತಿದ್ದರು.
ಬುಡಕಟ್ಟು ದಲಿತರಿಗೆ, ಗಿರಿಜನರಿಗೆ, ಮಲೆಕುಡಿಯರಿಗೆ, ಮಹಿಳೆಯರಿಗೆ ಯಕ್ಷಗಾನದ ಹಿಮ್ಮೇಳ- ಮುಮ್ಮೇಳಗಳನ್ನು ಕಲಿಸಿದ ಶ್ರೀ ಕುರುಪ್ ಧರ್ಮಸ್ಥಳದ ಯಕ್ಷಗಾನ ಲಲಿತ ಕಲಾ ಕೇಂದ್ರದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದವರು. ಯಕ್ಷಗಾನ ಕುರಿತಂತೆ ಹಲವು ಕೃತಿಗಳನ್ನು ಬರೆದ ಕೀರ್ತಿ ಶ್ರೀ ಗೋಪಾಲಕೃಷ್ಣ ಕುರುಪ್ ಅವರದು.
Categories
ಶ್ರೀ ಗೋಪಾಲಕೃಷ್ಣ ಕುರುಪ್
