Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಚನ್ನಬಸಪ್ಪ ಹಾಲಹಳ್ಳಿ

ಬೀದರ್ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದವರು ಶ್ರೀ ಚನ್ನಬಸಪ್ಪ ಹಾಲಹಳ್ಳಿ ಅವರು.
೧೯೪೭ರಲ್ಲಿ ಜನನ. ಸುಮಾರು ೩೫ ವರ್ಷಗಳಿಂದ ಕನ್ನಡ ನಾಡುನುಡಿ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಕೆ. ಬೀದರ್ನ ಭೂಮರೆಡ್ಡಿ ಮಹಾವಿದ್ಯಾಲಯದ ಬಿ.ಎ.ಪದವಿ, ಬೆಳಗಾಂವ್ನ ಆರ್.ಎಲ್. ಕಾನೂನು ಕಾಲೇಜಿನಿಂದ ಎಲ್.ಎಲ್.ಬಿ. ಪದವಿ ಗಳಿಕೆ. ೧೯೬೮ ಲಂದ ವಕೀಲ ವೃತ್ತಿಗೆ ಪದಾರ್ಪಣೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶ್ರೀಯುತರು ಚೀದರ್ನ ಚಿದಂಬರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ-ಕಾರ್ಯದರ್ಶಿ, ಶ್ರೀ ಚನ್ನಬಸಪ್ಪ ಹಾಲಹಳ್ಳಿ ಅವರು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಸಲ್ಲಿಸುತ್ತಿರುವ ಸೇವೆ ಮಹತ್ತರವಾದುದು. ಈ ಸಂಸ್ಥೆಯ ಅಡಿಯಲ್ಲಿ ಇಪ್ಪತ್ತೈದು ಅಂಗಸಂಸ್ಥೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತವೆ. ಶ್ರೀ ಚಿದಂಬರ ಶಿಕ್ಷಣ ಸಂಸ್ಥೆಯಡಿ ಆಯುರ್ವೇಕ್ ಮೆಡಿಕಲ್ ಕಾಲೇಜು ಸೇಲದಂತೆ ಹನ್ನೆರಡು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಬೀದರ್-ಗುಲಬರ್ಗಾ ರೈಲು ಮಾರ್ಗ, ಬೀದರ್ ನಾಗಲಕ ವಿಮಾನಯಾನ, ಬೀದರ್ ಪ್ರವಾಸೋದ್ಯಮದ ಕೇಂದ್ರವಾಗಬೇಕೆಂಬ ಆಶಯದಿಂದ ರಚನಾತ್ಮಕ ಯೋಜನೆಗಳನ್ನು ರೂಪಿಸಿ ಬೀದರ್ಭಾಗದ ಸರ್ವಾಂಗೀಣ ಉನ್ನತಿಗಾಗಿ ಶ್ರಮಿಸುತ್ತಿರುವ ಶ್ರೀ ಚೆನ್ನಬಸಪ್ಪ ಹಾಲಹಳ್ಳಿ ಅವರು ಹಲವಾರು ಸಂಘ ಸಂಸ್ಥೆಗಳ ಸದಸ್ಯರಾಗಿ, ಪದಾಧಿಕಾಲಿಯಾಗಿ ಸಲ್ಲಿಸಿರುವ ಸೇವೆ ಗಣನೀಯವಾದುದು.
ನಿರಂತರ ಶೈಕ್ಷಣಿಕ ಸೇವೆಗಾಗಿ ಬೀದರ್ ಜಿಲ್ಲಾ ಆಡಳತದಿಂದ ಸನ್ಮಾನ, ಪ್ರಭುರಾವ್ ಕಂಬಳವಾಲೆ ಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪಲಷತ್ತಿನ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಪುರಸ್ಕಾರಗಳು ಶ್ರೀಯುತರಿಗೆ ಸಂದಿವೆ.
ಬೀದಲಿಗೆ ಪಶುವೈದ್ಯಕೀಯ ವಿದ್ಯಾಲಯ, ಸರಕಾಲ ಕಾಲೇಜು ಬರಲು ಶ್ರಮಿಸಿದವರು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಕ್ರಿಯಾಶೀಲ ವ್ಯಕ್ತಿ ಶ್ರೀ ಚೆನ್ನಬಸಪ್ಪ ಹಾಲಹಳ್ಳಿ ಅವರು.