ತಮಟೆ ಕರ್ನಾಟಕದ ಅಪೂರ್ವ ಜನಪದ ಕಲೆಗಳಲ್ಲೊಂದು. ಬಹುಪಾಲು ಅಸ್ಪೃಶ್ಯ ಜನಸಮುದಾಯದ ಅಭಿವ್ಯಕ್ತಿ ಕಲೆಯಾದ ತಮಟೆ, ವಿವಿಧ ಧಾರ್ಮಿಕ ಆಚರಣೆಗಳ ಅವಿಭಾಜ್ಯ ಅಂಗವಾಗಿ ಬೆಸೆದುಕೊಂಡಿದೆ. ತಮಟೆ ಕಲೆಯೊಂದಿಗೆ ತಮ್ಮ ಜೀವನವನ್ನೇ ಬೆಸೆದುಕೊಂಡ ಹಿರಿಯ ಕಲಾವಿದ ಬೆಂಗಳೂರಿನ ಚಿಕ್ಕನರಸಪ್ಪ ತಮಟೆ ನರಸಪ್ಪನೆಂದೇ ಪ್ರಸಿದ್ಧಿ.
ವಂಶಪಾರಂಪರ್ಯ ಬಳುವಳಿಯಾಗಿ ಬಂದ ಈ ಕಲೆ ನರಸಪ್ಪನವರ ಜೀವನದ ಕಾಯಕವೇ ಆಯಿತು. ತಮ್ಮ ಅದ್ಭುತ ತಮಟೆ ವಾದನದಿಂದಲೇ ಕ್ಷಣ ಮಾತ್ರದಲ್ಲಿ ನೆರೆದ ಸಾವಿರಾರು ಜನರನ್ನು ಮಂತ್ರಮುಗ್ಧಗೊಳಿಸುವ ನರಸಪ್ಪನವರು ನಾಡಿನಾಚೆಗೂ ಈ ಕಲೆಯ ಠೇಂಕಾರವನ್ನು ಪಸರಿಸಿದ್ದಾರೆ. ತಮಟೆ ಕಲೆಯೊಂದಿಗೇ ಬೆಳೆಯುತ್ತಾ ನೂರಾರು ಯುವ ಕಲಾವಿದರನ್ನು ಬೆಳೆಸುತ್ತಾ ನೂರಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿರುವ ಶ್ರೀಯುತ ನರಸಪ್ಪನವರಿಗೆ ೨೦೦೪ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲು ಅತ್ಯಂತ ಸಂತೋಷವೆನಿಸುತ್ತದೆ.
Categories