Categories
ಕ್ರೀಡೆ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಚೇತನ್.ಆರ್.

ಅಂಗವೈಕಲ್ಯವನ್ನು ಹಿಮ್ಮೆಟ್ಟಿಸಿ ಸಾಧನೆಗೈದ ವಿಶಿಷ್ಟ ಚೇತನ ಚೇತನ್. ಆರ್. ಅಂತಾರಾಷ್ಟ್ರೀಯ ಪ್ಯಾರಾ ಒಲಂಪಿಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ಕೀರ್ತಿ ಮೆರೆದ ಕ್ರೀಡಾಪಟು.
ಹಾಸನದ ನಿವಾಸಿಯಾದ ಚೇತನ್ ಅವರಿಗೆ ಬಾಲ್ಯದಿಂದಲೂ ಕ್ರೀಡಾಸಕ್ತಿ. ಅಂಗವೈಕಲ್ಯವಿದ್ದರೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ನೆಚ್ಚಿನ ಹವ್ಯಾಸ. ಪರಿಶ್ರಮ ಮತ್ತು ಬದ್ಧತೆಯಿಂದ ಕ್ರೀಡಾಕ್ಷೇತ್ರದಲ್ಲಿ ತಲ್ಲೀನವಾದ ಚೇತನ್ ಸೀನಿಯರ್ ನ್ಯಾಷನಲ್ ಚಾಂಪಿಯನ್ಶಿಪ್ನ ಅಥ್ಲೆಟಿಕ್ಸ್ನಲ್ಲಿ ಎರಡು ಬಾರಿ ಬೆಳ್ಳಿಪದಕ, ಒಂದು ಬಾರಿ ಕಂಚಿನ ಪದಕ ವಿಜೇತರು. ಬೆಂಗಳೂರಿನಲ್ಲಿ ೨೦೦೮ರಲ್ಲಿ ಜರುಗಿದ ಏಷಿಯನ್ ಪ್ಯಾರಾ ಒಲಂಪಿಕ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿಪದಕ, ಚೆನ್ನೈನಲ್ಲಿ ನಡೆದ ಅಂತಾರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಿನ್ನದ ಪದಕ, ೨೦೦೯ರಲ್ಲಿ ಐರ್ಲೆಂಡ್ನಲ್ಲಿ ನಡೆದ ವರ್ಡ್ಡ್ವಾರ್ಫ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ನಾಡಿಗೆ ಕೀರ್ತಿ ತಂದ ಪ್ರತಿಭಾವಂತರು.