ಕಳೆದ ನಲವತ್ತು ವರ್ಷಗಳಿಂದ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ನಟರಾಗಿ ಕಿರುಚಿತ್ರ ನಿರ್ದೆಶಕರಾಗಿ ಸೇವೆ ಸಲ್ಲಿಸುತ್ತಿರುವವರು ಶ್ರೀ ಚೇತನ್ ರಾಮರಾವ್.
ಹಲವಾರು ಚಲನಚಿತ್ರಗಳಲ್ಲಿ ಪೋಷಕ ನಟರಾಗಿ ಚಿತ್ರರಸಿಕರ ಮೆಚ್ಚುಗೆಗೆ ಪಾತ್ರರಾದ ಶ್ರೀ ಚೇತನ್ ರಾಮರಾವ್ ಅವರು ಮೈಸೂರು ವಿಶ್ವವಿದ್ಯಾಲಯದ ಚಲನಚಿತ್ರ ಅಧ್ಯಯನ ವಿಭಾಗದಲ್ಲಿ ಗೌರವ ಉಪನ್ಯಾಸಕ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ಚೇತನ್ ರಾಮರಾವ್ ಖ್ಯಾತ ನಿರ್ದೇಶಕರಾದ ಜಿ.ವಿ. ಐಯ್ಯರ್ರವರ ಸಂಸ್ಕೃತ ಭಗವದ್ಗೀತೆ ಚಿತ್ರದಲ್ಲಿ ಧರ್ಮರಾಯನ ಪಾತ್ರವನ್ನು ಅಭಿನಯಿಸಿದ್ದು ಈ ಚಿತ್ರ ಕೇಂದ್ರದ ಸ್ವರ್ಣಕಮಲ ಪ್ರಶಸ್ತಿ ಪಡೆದಿದೆ. ವಾರ್ತಾ ಇಲಾಖೆಗಾಗಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಎಂಬ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿದ್ದಾರೆ. ೨೦೦೨ ೦೩ರ ರಾಜ್ಯ ಚಲನಚಿತ್ರ ಸಲಹಾ ಸಮಿತಿ ಸದಸ್ಯರು ಹಾಗೂ ಹಲವಾರು ವರ್ಷಗಳಿಂದ ದಸರಾ ಚಲನಚಿತ್ರ ಸಮಿತಿ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀ ಚೇತನ್ ರಾಮರಾವ್ ಅವರ ಅಭಿನಯವನ್ನು ಮೆಚ್ಚಿ ಹಲವಾರು ಸಂಘಗಳು ನಟನಾಚತುರ, ಕಲಾದ್ರೋಣ, ಕಲಾಭೀಷ್ಮ, ಕಲಾರತ್ನ ಮುಂತಾದ ಬಿರುದುಗಳನ್ನು ನೀಡಿ ಪುರಸ್ಕರಿಸಿದೆ.
ರಂಗಭೂಮಿಯ ಚಟುವಟಿಕೆಯಿಂದ ಬೆಳ್ಳಿತೆರೆಗೆ ಬಂದು ಸಹಜ ಅಭಿನಯಕ್ಕೆ ಹೆಸರಾದ ಪಂಚಭಾಷಾ ನಟರು ಶ್ರೀ ಚೇತನ್ ರಾಮರಾವ್ ಅವರು.
ರಾಜ್ಯ ಪ್ರಶಸ್ತಿ – ೨೦೦೪ : ಚಲನ ಚಿತ್ರ
Categories
ಶ್ರೀ ಚೇತನ್ ರಾಮರಾವ್
