ದೇಶ ಭಾಷೆಗಳ ಎಲ್ಲೆಮೀರಿ ಕೈಗಾರಿಕೋದ್ಯಮದಲ್ಲಿ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದವರು ಶ್ರೀ ಆದಿಕೇಶವುಲು ಅವರು.
ಶ್ರೀನಿವಾಸ ಟ್ರಸ್ಟ್ ಎಂಬ ಸಮಾಜೋಧಾರ್ಮಿಕ ಸಂಸ್ಥೆ-ಸ್ಥಾಪಿಸಿ ಶೈಕ್ಷಣಿಕ ಪ್ರಸಾರಕ್ಕೆ ಶ್ರಮಿಸುತ್ತಿದ್ದಾರೆ. ಕನ್ನಡ ತೆಲುಗು ಧಾರ್ಮಿಕ ಬಾಂಧವ್ಯದಲ್ಲೂ ಇವರ ಸಂಸ್ಥೆಯ ಪಾತ್ರ ಹಿರಿದು. ಕೊಲ್ಲೂರಿನಲ್ಲಿ ವೇದ ಪರಾಯಣ ಮಂಟಪ, ಶೃಂಗೇರಿಯಲ್ಲಿ ಭಾರತಿ ತೀರ್ಥ ಆನಂದ ಸಭಾಂಗಣ ಮತ್ತು ಹೊರರೋಗಿಗಳ ಚಿಕಿತ್ಸಾ ಘಟಕಗಳನ್ನು ಕಟ್ಟಿಸಿದ್ದಾರೆ. ಗುಂಡ್ಲು ಪೇಟೆಯ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಮಾಡಿಸಿದ್ದಾರೆ. ಇಂಥ ಅನೇಕ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕರ್ನಾಟಕ ಮತ್ತು ಆಂಧ್ರದಲ್ಲಿ ಉದಾರ ಕೊಡುಗೆ ನೀಡಿದ್ದಾರಲ್ಲದೆ ಆಂಧ್ರದಲ್ಲಿನ ಬರಪೀಡಿತ ಜನತೆಗೆ ಬೆಂಗಳೂರಿನಿಂದ ನಿಧಿ ಸಂಗ್ರಹಿಸಿ ಸಹಕರಿಸಿದ್ದಾರೆ.ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸ ತಾಲೂಕಿನ ೧೮೦ ಹಳ್ಳಿಗಳಿಗೆ ಕುಡಿಯುವ ನೀರುಪೂರೈಕೆ ಯೋಜನೆ ಕೈಗೊಂಡಿದ್ದು ಇವರ ಬಹುದೊಡ್ಡ ಸಾಧನೆಯೇ ಸರಿ. ತಮ್ಮ ವೈದೇಹಿ ಆರೋಗ್ಯ ಸಂಸ್ಥೆ ಮೂಲಕ ವರ್ಷಕ್ಕೆ ಸುಮಾರು ೫೦೦ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿರುವ ಹೆಗ್ಗಳಿಕೆ ಇವರದ್ದು. ಬೇರೆ ಬೇರೆ ಸಂಘ ಸಂಸ್ಥೆಗಳ ಜತೆಗೂ ಸಕ್ರಿಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಕೊಂಡಿರುವ ಮಹಾಚೇತನ ಶ್ರೀ ಡಿ.ಕೆ. ಆದಿಕೇಶವುಲು.
Categories