Categories
ಕೃಷಿ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಡಿ.ಡಿ. ಭರಮಗೌಡ

ಸಾವಯವ ಕೃಷಿಯನ್ನು ಆಶ್ರಯಿಸಿದ ಪ್ರಗತಿಪರ ಕೃಷಿಕರು ಶ್ರೀ ಡಿ.ಡಿ. ಭರಮಗೌಡ ಅವರು.
೧೯೪೭ರಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಜನನ. ಬಿ.ಎಸ್ಸಿ. ಪದವಿಯ ನಂತರ ಕೃಷಿಕ ವೃತ್ತಿಯತ್ತ ಒಲವು. ಸಂಪೂರ್ಣ ಮಳೆಯಾಶ್ರಿತ ಕಪ್ಪುಭೂಮಿಯನ್ನು ಆಧಲಸಿ ಹತ್ತಿ, ಚಳಿಜೋಳ, ನೆಲಗಡಲೆ, ಈರುಳ್ಳಿ, ಮೆಣಸಿನಕಾಯಿ, ಹುರುಳಿ, ಅಲಸಂದೆ, ಎಚ್ಚು, ನವಣೆ, ಸಜ್ಜೆ, ಕೊತ್ತಂಬಲಿಯಂತಹ ಬಹುತೇಕ ಬೆಳೆಗಳನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಸಾವಯವ ಕೃಷಿ ವಿಧಾನದ ಮೂಲಕ ಬೆಳೆಯುವ ಮೂಲಕ ರಾಷ್ಟ್ರಕ್ಕೆ ಮಾದಲ ಕೃಷಿಕರೆಂದು ಹೆಸರು ಗಆಕೆ. ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಮಿಶ್ರಬೆಳೆ ಪದ್ಧತಿ, ಅಂತರಬೆಳೆ ಪದ್ಧತಿ ಅನುಸಲಿಸಿ, ನಾಟಿಬೀಜ ಬಳಕೆ ಮೂಲಕ ಹೆಚ್ಚು ಇಳುವಲ ಮತ್ತು ಅಧಿಕ ವರಮಾನ ಪಡೆಯುತ್ತಿರುವ ಕೃಷಿಕರು.
ಡಾ|| ವಂದನಾಶಿವ, ಅರೋವಿಲ್ ಮದರ್ ಮತ್ತು ಬರ್ನಾಡ್ ಇವರ ವಿಚಾರಗಳಿಂದ ಪ್ರಭಾವಿತರಾದ ಪಲಸರ ಪ್ರೇಮಿ, ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆಯ ನಾಶ, ಹುಳುಗಳ ನಾಶ ಮುಂತಾದವುಗಳನ್ನು ತಡೆಗಟ್ಟಲು, ಸಸ್ಯಸಾರ, ಕಷಾಯ, ಸಗಣಿ ಇತ್ಯಾದಿಗಳ ಮೂಲಕ ಬೆಳೆರಕ್ಷಣೆಯನ್ನು ರೂಢಿಗೆ ತಂದ ಶ್ರಮಿಕರು. ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಅಲ್ಲದೆ ದಕ್ಷಿಣ ಕೊಲಿಯಾ, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ ರಾಷ್ಟ್ರಗಳಲ್ಲಿ ಸಂಚಲಸಿ ವಿಚಾರ ಸಂಕಿರಣಗಳ ಮೂಲಕ ಸಾವಯವ ಕೃಷಿ ಪ್ರಾಮುಖ್ಯತೆಯನ್ನು ಸಾಲದವರು.
ಆಕಾಶವಾಣಿ, ದೂರದರ್ಶನಗಳಲ್ಲಿ ಕೃಷಿ ಸಂದರ್ಶನ, ಭಾಷಣ, ಲೇಖನಗಳನ್ನು ಪ್ರಕಟಿಸಿರುವ ಶ್ರೀಯುತರು ಸ್ವಂತ ಪತ್ರಿಕೆ, ಸಹಜ ಸಾಗುವಳಿ, ಅಂಕಣಕಾರರು. ಭಾರತೀಯ ಸಾವಯವ ಬೇಸಾಯ ಸಂಘಟನೆಯ ರಾಷ್ಟ್ರಾಧ್ಯಕ್ಷರು, ಕೃಷಿ ವಿಜ್ಞಾನಗಳ ಸದಸ್ಯರು ಮುಂತಾದ ಕೃಷಿ ಸಂಬಂಧಿ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲ ಕಾರ್ಯನಿರ್ವಹಣೆ. ಹದಿನೆಂಟು ವರ್ಷಗಳ ಹಿಂದೆ ರೈತರೇ ಸ್ಥಾಪಿಸಿರುವ ಧಲತ್ರಿ ಸಂಸ್ಥೆ ಸ್ಥಾಪಕ ಸದಸ್ಯರು. ಸಾಯವಯ ಕೃಷಿ ಪ್ರಚಾರಕರು, ರೈತರ ಹಿತಚಿಂತಕರು ಶ್ರೀ ಡಿ.ಡಿ. ಭರಮಗೌಡ್ರ ಅವರು.