ದೀನ ದಲಿತರ, ಕೃಷಿ ಕಾರ್ಮಿಕರ, ಬಡಜನರ ಏಳಿಗೆಗಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ನ್ಯಾಯವಾದಿ ಮತ್ತು ಸಮಾಜಸೇವಾ ಕಾರ್ಯಕರ್ತರು ಶ್ರೀ ಶಿರ್ತಾಡಿ ವಿಲಿಯಂ ಪಿಂಟೊ ಅವರು.
ಕಾರ್ಕಳ ತಾಲೂಕಿನ ಶಿರ್ತಾಡಿ ಎಂಬ ಹಳ್ಳಿಯ ಬಡ ರೈತ ಕುಟುಂಬದಲ್ಲಿ ೧೯೩೯ರಲ್ಲಿ ಜನನ, ಪ್ರಾಥಮಿಕ ವಿದ್ಯಾಭ್ಯಾಸ ಶಿರ್ತಾಡಿಯಲ್ಲಿ. ಉಡುಪಿಯ ಎಂ.ಜಿ.ಎಂ. ಕಾಲೇಜಿನಿಂದ ಎಲ್ಎಲ್.ಬಿ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು ೨೨ ವರ್ಷ ಉಡುಪಿ ಲಾ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಶ್ರೀ ಶಿರ್ತಾಡಿ ವಿಲಿಯಂ ಪಿಂಟೊ ಅವರು ಉಡುಪಿಯ ಜನಪ್ರಿಯ ನ್ಯಾಯವಾದಿ.
ಭೂಸುಧಾರಣೆ ಕುರಿತು ಕರ್ನಾಟಕ ಭೂ ಸುಧಾರಣೆ ಸಂಕ್ಷಿಪ್ರ ಪರಿಚಯ ‘ಜಿಲ್ಲಾ ಪಂಚಾಯತ್’ ಮಂಡಲ ಪಂಚಾಯತ್ ಕಾನೂನು ಹಾಗೂ ರಾಜಕೀಯ ಜಾಗೃತಿ, ಕರ್ನಾಟಕ ಪಂಚಾಯತ್ ರಾಜ್ ವಿಧೇಯಕ ರಾಜ್ಯ ಅಧಿನಿಯಮ ೯೩, ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸ್ಥಾಪಕ ಸದಸ್ಯರಾಗಿ ಸುಮಾರು ೨೦ ವರ್ಷ ಉಡುಪಿ ತಾಲೂಕು ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷರಾಗಿ ಉಡುಪಿ ಎಲ್.ಐ.ಸಿ. ಯೂನಿಯನ್ನಿನ ಗೌರವ ಸದಸ್ಯರಾಗಿ ಹೀಗೆ ಹಲವು ಸಂಸ್ಥೆಗಳಲ್ಲಿ ಸಕ್ರಿಯ ಸೇವೆ ಸಲ್ಲಿಸಿದ್ದಾರೆ.
ನೂರಾರು ಭಾಷಣಗಳ ಮೂಲಕ ಬಡಗೆಲ್ದಾರರಲ್ಲಿ ಜಾಗೃತಿ ಮೂಡಿಸಿದ ಶ್ರೀ ಶಿರ್ತಾಡಿ ವಿಲಿಯಂ ಪಿಂಟೋ ಅವರಿಗೆ ಸಂದೇಶ ವಿಶೇಷ ಪ್ರಶಸ್ತಿ, ಸಿಂಹ ಪ್ರಶಸ್ತಿ, ಕ್ಯಾಥೊಲಿಕ್ ಸಭಾ ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಭೂ ಸುಧಾರಣಾ ಕಾನೂನು ಜಾರಿಯಾದಾಗ ನೂರಾರು ಭೂಹೀನ ರೈತರಿಗೆ ಭೂಮಿಯ ಹಕ್ಕನ್ನು ದೊರಕಿಸಿದೆ., ಗ್ರಾಮೀಣ ಜನರಿಗೆ ಕಾನೂನಿನ ನೆರವು ಹಾಗೂ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸಮರ್ಪಣಾಭಾವದಿಂದ ಶ್ರಮಿಸುತ್ತಿರುವ ನ್ಯಾಯ ಪರವಾಗಿ ಸಮಾಜ ಸೇನಾ ಧುರೀಣ ಶ್ರೀ ಶಿರ್ತಾಡಿ ವಿಲಿಯಂ ಪಿಂಟೋ ಅವರು.
Categories
ಶ್ರೀ ತಿರ್ತಾಡಿ ವಿಲಿಯಂ ಪಿಂಟೊ
