Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ತೋಂಟೇಶ ಶೆಟ್ಟಿ

ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಸಮಾಜಸೇವಾ ಧುರೀಣರು ಶ್ರೀ ತೋಂಟೇಶ ಶೆಟ್ಟಿ ಅವರು.
ಗದಗಿನ ನೀರು ಸಮಸ್ಯೆ, ಜಿಲ್ಲಾ ಕೇಂದ್ರಕ್ಕಾಗಿ ಹೋರಾಟ, ಆಸ್ಪತ್ರೆಗಳ ಸುಧಾರಣೆ, ಹೀಗೆ ಜಿಲ್ಲೆಯ ಎಲ್ಲ ಸಾಮಾಜಿಕ ಕಾರ್ಯಗಳಲ್ಲಿ ಜಾಗೃತ ನಾಗರಿಕರಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅರ್ಥಪೂರ್ಣಗೊಳಿಸುವ ರೀತಿಯಲ್ಲಿ ಸಾಹಿತ್ಯ ಕ್ಷೇತ್ರ ಮತ್ತು ಆಡಳಿತ ಸುಧಾರಣೆ ಇವುಗಳ ಬಗ್ಗೆ ಶ್ರೀ ತೋಂಟೇಶ ಶೆಟ್ಟಿ ಸದಾ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಜನಹಿತ ಪಕ್ಷಪಾತಿ ನಾಯಕರಾಗಿ, ಪ್ರಜ್ಞಾವಂತ ನಾಗರಿಕರಾಗಿ, ಸಮಾಜ ಸೇವೆಗೆ ಅರ್ಪಣಾ ಮನೋಭಾವದಿಂದ ದುಡಿಯುತ್ತಿರುವವರು ಶ್ರೀ ತೋಂಟೇಶ ಶೆಟ್ಟಿ ಅವರು.