Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ದಯಾನಂದ ನಾಯಕ್

ನಿಷ್ಕಳಂಕ ಮತ್ತು ದಿಟ್ಟತನದ ಸೇವೆಯ ಮೂಲಕ ಪ್ರಖ್ಯಾತರಾಗಿರುವ ಹೊರನಾಡ ಕನ್ನಡಿಗ ಶ್ರೀ ದಯಾನಂದ ನಾಯಕ್ ಅವರು. ೧೯೬೭ರಲ್ಲಿ ಕಾರ್ಕಳ ತಾಲೂಕಿನ ಎಣ್ಣೆಹೊಳೆಯಲ್ಲಿ ಜನನ, ಬಿ.ಕಾಂ. ಪದವಿ ಪಡೆದ ಬಳಿಕ ೧೯೯೪ರ ಮಹಾರಾಷ್ಟ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆ. ಪೊಲೀಸ್ ಇಲಾಖಾ ದೈಹಿಕ ಪರೀಕ್ಷೆಯಲ್ಲಿ ೨೦೦ಕ್ಕೆ ೧೯೮ ಅಂಕಗಳ ಸಾರ್ವಕಾಲಿಕ ದಾಖಲೆ.
೧೯೯೬ರಲ್ಲಿ ಮುಂಬಯಿನ ಜುಹು ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ಸ್ವೀಕಾರ. ೧೯೯೬ರಿಂದ ೨೦೦೪ರ ವರೆಗೆ ಕುಖ್ಯಾತ ರೌಡಿಗಳನ್ನು ಬಲಿಹಾಕುವುದರ ಜೊತೆಗೆ ಜುಹು ಬೀಚ್ನಲ್ಲಿ ಇಬ್ಬರು ದರೋಡೆಕೋರರನ್ನು ಎನ್ಕೌಂಟರ್ ಮೂಲಕ ಹತ್ಯೆಗೈದು ತನ್ಮೂಲಕ ನೂರಾರು ಸಾರ್ವಜನಿಕರನ್ನು ರಕ್ಷಿಸಿದ್ದಾರೆ. ವಿವಿಧ ಎನ್ಕೌಂಟರ್ಗಳಲ್ಲಿ ದುಷ್ಕರ್ಮಿಗಳ ಬಲಿತೆಗೆದುಕೊಳ್ಳುವ ಮೂಲಕ ಸಮಾಜದ ವಿವಿಧ ವ್ಯಕ್ತಿಗಳನ್ನು ಹಾಗೂ ಶಾಂತಿ ಭದ್ರತೆಗಳನ್ನು ಸಂರಕ್ಷಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದಿಂದ, ಕರ್ನಾಟಕ ಸರ್ಕಾರದಿಂದ ಮತ್ತು ಪೊಲೀಸ್ ಇಲಾಖೆಗಳಿಂದ ನಿರಂತರ ಪ್ರಶಂಸೆ ಮತ್ತು ಅಭಿನಂದನೆಯ ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪದಕ ಪಡೆದವರು. ಸಾಮಾಜಿಕ ಮತ್ತು ಶೈಕ್ಷಣಿಕ ಸೇವಾ ವಲಯದಲ್ಲೂ ತಮ್ಮ ಛಾಪನ್ನು ಒತ್ತಿರುವ ಹೊರನಾಡ ಕನ್ನಡಿಗ ಶ್ರೀ ದಯಾನಂದ ನಾಯಕ್ ಅವರು.