Categories
ರಂಗಭೂಮಿ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ದೇವಪುತ್ರ

ಜಾನಪದ ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ತಬಲಾ ಕಲಾವಿದ ಶ್ರೀ ದೇವಪುತ್ರ ಅವರು.
ರಾಯಚೂರಿನಲ್ಲಿ ೧೯೨೭ ರಲ್ಲಿ ಜನಿಸಿದ ಶ್ರೀ ದೇವಪುತ್ರ ಅವರು ಕಲೆಯ ಗೀಳನ್ನು ಹಚ್ಚಿಕೊಂಡು, ಹದಿನಾರು ವರ್ಷದವರಿರುವಾಗಲೇ ಕಲಾಸೇವೆಯನ್ನು ಆರಂಭಿಸಿದರು. ರಾಯಚೂರು, ಕೊಪ್ಪಳಗಳಲ್ಲಿ ಮನೆಮಾತಾಗಿರುವ ಶ್ರೀ ದೇವಪುತ್ರ ಅವರು ಐದು ದಶಕಗಳಿಂದ ತಬಲಾ ವಾದಕರಾಗಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ.
ತಬಲಾ, ಡೋಲಕ್, ಹಲಗೆ, ಮದ್ದಲಿ, ದಮಡಿ ಬಾರಿಸುವುದರಲ್ಲಿಯೂ ಪರಿಣತಿ ಪಡೆದಿರುವ ಶ್ರೀ ದೇವಪುತ್ರರು ತತ್ವಪದಗಳನ್ನು ಹಾಡುವುದರಲ್ಲಿಯೂ ಸಿದ್ಧಹಸ್ತರು, ರಾಯಚೂರು, ಕೊಪ್ಪಳಗಳಲ್ಲಿ ದೊಡ್ಡಾಟ ಎಲ್ಲಿ ನಡೆದರೂ ಮದ್ದಲಿ ವಾದಕರಾಗಿ ಜನಪ್ರಿಯತೆ ಪಡೆದಿರುವ ಶ್ರೀಯುತರು ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರು.
ಅನೇಕ ರಂಗಭೂಮಿ ಕಲಾವಿದರಿಗೆ ತಬಲಾ ಸಾಥಿಯಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಅಖಿಲ ಭಾರತ ೬೨ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಮೈಸೂರು ದಸರಾ ಮಹೋತ್ಸವ, ಮುಂಬಯಿಯ ಭಾರತೀಯ ವಿಕಾಸ ಪರಿಷತ್ ಮೊದಲಾದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ೧೯೯೮ರ ಸಾಲಿನ ಪ್ರಶಸ್ತಿ ಪುರಸ್ಕೃತರು.
ಸ್ವಯಂ ಪರಿಶ್ರಮ, ಸತತ ಸಾಧನೆಯಿಂದ ಜಾನಪದ ಕಲಾವಿದರಾಗಿ ಸಿದ್ಧಿಯನ್ನು ಪಡೆದವರು ಶ್ರೀ ದೇವಪುತ್ರ ಅವರು.