ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರ, ತಂತ್ರಶಾಸ್ತ್ರದಲ್ಲಿ ಹಿರಿಯ ವೈದಿಕ ವಿದ್ವಾಂಸರು ದೈವಜ್ಞ ಕೆ.ಎನ್. ಸೋಮಯಾಜಿ ಅವರು.
೧೯೫೯ರಲ್ಲಿ ವೈದಿಕ ವಿದ್ವಾಂಸ ಮನೆತನದಲ್ಲಿ ಜನನ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಕಟಿಸಿರುವ ರಾಷ್ಟ್ರೀಯ ಪಂಚಾಂಗಕ್ಕೆ ಮುಖ್ಯ ಸಂಪಾದಕರು. ತಿರುಮಲ ತಿರುಪತಿ ದೇವಸ್ಥಾನ ಪ್ರಕಟಿಸುವ ಶಾಸ್ತ್ರ ಸಿದ್ಧ ಪಂಚಾಂಗಕ್ಕೆ ಸಂಪಾದಕರಾಗಿದ್ದರು. ಕಲ್ಪತರು ರಿಸರ್ಚ್ ಅಕಾಡೆಮಿ ಎಂಬ ಪ್ರಾಚ್ಯ ಸಂಶೋಧನ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದು, ಇದರಲ್ಲಿ ವೇದ, ಆಗಮಶಾಸ್ತ್ರ ಮತ್ತು ಇತರ ವಿಭಾಗಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಸಂಸ್ಥೆಯ ಪ್ರಧಾನ ಸಂಪಾದಕರಾಗಿ ದೈವಜ್ಞಕೆ.ಎನ್. ಸೋಮಯಾಜಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶವಿದೇಶಗಳಲ್ಲಿ ಸಂಚರಿಸಿ ಅನೇಕ ಗಣ್ಯರಿಗೆ ಜ್ಯೋತಿಷ್ಯ ಸಲಹೆ ನೀಡಿರುತ್ತಾರೆ.
ಶೃಂಗೇರಿ ಶಾರದಾ ಪೀಠದ ಧರ್ಮಾಧಿಕಾರಿಗಳೂ ಆಗಿರುವ ಶ್ರೀಯುತ ದೈವಜ್ಞ ಕೆ.ಎನ್. ಸೋಮಯಾಜಿ ಅವರು ವೇದಾಧ್ಯಯನ ಮತ್ತು ಸಂಸ್ಕೃತ ಭಾಷೆಯ ಏಳಿಗೆಗಾಗಿ ಅವಿರತ ದುಡಿಯುತ್ತಿರುವ ಹಿರಿಯ ಚೇತನ.
Categories
ಶ್ರೀ ದೈವಜ್ಞ ಕೆ.ಎನ್. ಸೋಮಯಾಜ
