ಕನ್ನಡದ ಪ್ರಮುಖ ವಿಜ್ಞಾನ ಹಾಗೂ ಪಲಸರ ಬರಹಗಾರರಲ್ಲಿ ನಾಗೇಶ್ ಹೆಗಡೆ ಅವರದು ಅಗ್ರಮಾನ್ಯ ಹೆಸರು.
ಉತ್ತರ ಕನ್ನಡದವರಾದ ನಾಗೇಶ್ ಹೆಗಡೆ ಅವರು ಖರಗಪುರದ ಐಐಟಿಯಲ್ಲಿ ಭೂಗರ್ಭ ಸ್ನಾತಕೋತ್ತರ ಪದವಿ ಪಡೆದ ನಂತರ ಆಯ್ಕೆ ಮಾಡಿಕೊಂಡಿದ್ದು ಪರಿಸರ ಶಾಸ್ತ್ರ ಅಧ್ಯಯನ. ನೈನಿತಾಲ್ನ ಕುಮಾಂವೋ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದ ನಾಗೇಶ್ ಹೆಗಡೆ ಅವರು ೭೦ರ ದಶಕದಲ್ಲಿ ಪ್ರಜಾವಾಣಿ ಸಮೂಹದ ವೈಜ್ಞಾನಿಕ ಬರಹಗಾರರಾಗಿ ಪತ್ರಿಕೋದ್ಯಮ ಪ್ರವೇಶಿಸಿದರು.
ಪತ್ರಕರ್ತರಾಗಿದ್ದುಕೊಂಡು ನಾಗೇಶ್ ಹೆಗಡೆ ಅವರು ಕರ್ನಾಟಕದ ಹಲವಾರು ಪಲಸರ ಸಮಸ್ಯೆಗಳನ್ನು ಕುಲತು ದನಿಯೆತ್ತಿದವರು. ಕೈಗಾದಲ್ಲಿ ಅಣುಕೇಂದ್ರ ನಿರ್ಮಾಣ, ಪಶ್ಚಿಮ ಘಟ್ಟಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆ ಹೀಗೆ ಹಲವಾರು ಪಲಸರ ಸಮಸ್ಯೆಗಳನ್ನು ಬೆಳಕಿಗೆ ತಂದ ನಾಗೇಶ್ ಹೆಗಡೆ ಅವರು ಕರ್ನಾಟಕದಲ್ಲಿ ಪಲಸರ ಜಾಗೃತಿಗಾಗಿ ಶ್ರಮಿಸಿದವರು. ತಮ್ಮ ಅಧ್ಯಯನ ಪೂರ್ಣ ಬರಹಗಳಿಂದ ನಾಡಿನ ಹಲವಾರು ಪಲಸರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲದ ನಾಗೇಶ್ ಹೆಗಡೆ ಅವರು ಇರುವುದೊಂದೇ ಭೂಮಿ, ನಮ್ಮೊಳಗಿನ ಬ್ರಹ್ಮಾಂಡ, ಗಗನ ಸಟಿಯರ ಸೆರಗ ಹಿಡಿದು, ಮಂಗಳನಲ್ಲಿ ಜೀವಲೋಕ ಅಂತಲಕ್ಷದಲ್ಲಿ ಮಹಾಸಾಗರ ಹಲವಾರು, ಬರೆದಿರುವ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.
ಪಲಸರ ಸಮಸ್ಯೆಗಳನ್ನು ಜನರ ಮನಮುಟ್ಟುವಂತೆ ಬರೆಯುವಲ್ಲಿ ನಾಗೇಶ್ ಹೆಗಡೆ ಅವರು ಪಲಣತರು. ಕಳೆದ ೩ ದಶಕಗಳಿಂದ ಸತತವಾಗಿ ಪ್ರಜಾವಾಣಿ ಪತ್ರಿಕೆಯಲ್ಲಿ ವಿಜ್ಞಾನ ಅಂಕಣ ಬರೆಯುತ್ತಿರುವ ನಾಗೇಶ್ ಹೆಗಡೆ ಅವರು ಅನೇಕ ಅಭಿವೃದ್ಧಿಪರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಕೆಲವು ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಪಲಸರ ಶಿಕ್ಷಣ, ಮಾಅನ್ಯದ ಬಗ್ಗೆ ಜಾಗೃತಿ, ನೀಲನ ಸಂರಕ್ಷಣೆ ಮೊದಲಾದವುಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳುವಆಕೆ ನೀಡುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಬೆಂಗಳೂರು ಮಹಾನಗರದ ಪಲಸರ ಪರಿಸ್ಥಿತಿ ಕುಲತು ಮಕ್ಕಳಿಗಾಗಿ ಸರಳವಾದ ಪುಸ್ತಕವನ್ನು ರಚಿಸಿರುವ ನಾಗೇಶ್ ಹೆಗಡೆ ಅವರು ಅನೇಕ ಪ್ರತಿಷ್ಠಿತ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಕರ್ನಾಟಕ ಸರ್ಕಾರದ ಪಲಸರ ಪ್ರಶಸ್ತಿಯಲ್ಲದೆ ಹಲವಾರು ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಪತ್ರಕರ್ತ, ಪರಿಸರ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಕ್ರಿಯಾಶೀಲ ಬರಹಗಾರರು ಶ್ರೀ ನಾಗೇಶ್ ಹೆಗಡೆ ಅವರು.
Categories
ಶ್ರೀ ನಾಗೇಶ್ ಹೆಗಡೆ
