Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಪಿ.ಬಿ ಸಂತಪ್ಪನವರ್

ಶಿಕ್ಷಣ ಕ್ಷೇತ್ರದಲ್ಲಿ ಗುರುತಾರ್ಹ ಸೇವೆ ಸಲ್ಲಿಸಿದವರು ಡಾ. ಪಿ.ಬಿ.ಶಾಂತಪ್ಪನವರ್. ವಿದ್ಯಾರ್ಥಿಗಳ ಮನಗೆದ್ದ ಸಂಸ್ಕೃತ ವಿದ್ವಾಂಸರು.
ಕಲಬುರಗಿ ಜಿಲ್ಲೆಯವರಾದ ಶಾಂತಪ್ಪನವರ್ ಶಿಕ್ಷಣ ತಜ್ಞರು. ಕನ್ನಡ, ಸಂಸ್ಕೃತ, ಇಂಗ್ಲೀಷ್, ಹಿಂದಿ ಮತ್ತು ಮರಾಠಿ ಭಾಷೆಯ ಮೇಲೆ ಸಮಾನ ಹಿಡಿತ ಸಾಧಿಸಿರುವವರು. ೧೯೫೨ರಲ್ಲಿ ಜನಿಸಿದ ಶಾಂತಪ್ಪನವರ್ ಅವರು ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ, ಡೀನ್ ಆಗಿ ಕಾರ್ಯನಿರ್ವಹಿಸಿದವರು. ವಿದ್ಯಾರ್ಥಿಗಳ ಏಳೆಗೆ ಶ್ರಮಿಸಿದ ಗುರು.