ಹವ್ಯಾಸಿ ರಂಗಭೂಮಿ, ರೇಡಿಯೋ, ಚಲನಚಿತ್ರ ಮೊದಲಾದ ಸಾಂಸ್ಕೃತಿಕ ರಂಗದಲ್ಲಿ ಒಲವುಳ್ಳವರು ಶ್ರೀ ಪ್ರಭಾಕರ ಸಾತಖೇಡ ಅವರು.
ಜನನ ೧೯೪೬ರಲ್ಲಿ . ಗಿರಡ್ಡಿ ಗೋವಿಂದರಾಜ, ಕುಸನೂರು, ಪ್ರೇಮಾ ಕಾರಂತ ಮೊದಲಾದವರ ಕನ್ನಡ ಸಂಸ್ಕೃತ ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಕಂಬಾರ, ಕುರ್ತಕೋಟಿ, ಶ್ರೀರಂಗ, ಕುಸನೂರ ಮೊದಲಾದವರ ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ. ಕಲಬುರ್ಗಿಯ ರಂಗೋದ್ಯಮ ಸಂಸ್ಥೆಯ ಸಂಚಾಲಕರಾಗಿ ಕನ್ನಡ ಸಾಹಿತ್ಯ ಸಂಘದ ನಾಟಕ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದಾರೆ. ಆಕಾಶವಾಣಿ, ದೂರದರ್ಶನ ನಾಟಕಗಳಲ್ಲಿ ಅಭಿನಯಿಸಿರುವ ಶ್ರೀಯುತರು ‘ಆಧುನಿಕ ದ್ರೋಣ’ ನಾಟಕವನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಅದ್ಭುತ ಅಭಿನಯದಿಂದಾಗಿ ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರಸಿದ್ಧ ನಟ, ನಿರ್ದೇಶಕರಾಗಿ ಹವ್ಯಾಸಿ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಲಾವಿದ ಶ್ರೀ ಪ್ರಭಾಕರ ಸಾತಖೇಡ ಅವರು.
Categories