Categories
ಪತ್ರಿಕೋದ್ಯಮ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಸವರಾಜ ಸ್ವಾಮಿ

ರಾಯಚೂರಿನಲ್ಲಿ ಸುದ್ದಿಮೂಲ ಎಂಬ ಜಿಲ್ಲಾ ಪತ್ರಿಕೆಯೊಂದನ್ನು ಸಮರ್ಥವಾಗಿ ಕಟ್ಟಿ ನಡೆಸುತ್ತಿರುವ ಬಸವರಾಜ ಸ್ವಾಮಿ ಅವರು ಜಿಲ್ಲಾ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ದೊರಕಿಸಿಕೊಟ್ಟವರು.
ರಾಜ್ಯಮಟ್ಟದ ಪತ್ರಿಕೆಗಳಿಗೆ ಸರಿಸಮನಾಗಿ ಜಿಲ್ಲಾ ಪತ್ರಿಕೆಯನ್ನು ಸಜ್ಜುಗೊಳಿಸಿ ಅನೇಕ ಆವೃತ್ತಿಗಳನ್ನು ತರುವ ಮೂಲಕ ಹೊಸದೊಂದು ಶಕೆ ಆರಂಭಿಸಿದ ಬಸವರಾಜ ಸ್ವಾಮಿ ಅನೇಕ ಸಾಮಾಜಿಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ಜನಮುಖಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ.
ಬಸವರಾಜಸ್ವಾಮಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಸಣ್ಣ ಪತ್ರಿಕೆಗಳ ಸಂಪಾದಕರ ಸಂಘ, ಮೊದಲಾದ ವೃತ್ತಿಪರ ಸಂಸ್ಥೆಗಳ ಗೌರವ ಪುರಸ್ಕಾರಗಳು ಲಭಿಸಿವೆ.