Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಬಿ.ಎನ್. ಬ್ರಹ್ಮಾಚಾರ್ಯ

ದೇಸೀ ವೈದ್ಯ ಪದ್ಧತಿಗಳನ್ನು ಅಳವಡಿಸುವುದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿರುವ ಪ್ರಸಿದ್ಧ ಪ್ರಕೃತಿ ಹಾಗೂ ಯೋಗ ಶಿಕ್ಷಣತಜ್ಞರು ಶ್ರೀ ಬಿ.ಎನ್. ಬ್ರಹ್ಮಾಚಾರ್ಯ ಅವರು.
ತುಮಕೂಲಿನವರಾದ ಬ್ರಹ್ಮಾಚಾರ್ಯ ಅವರು ಕರ್ನಾಟಕ ಸರ್ಕಾರದ ಭಾರತೀಯ ವೈದ್ಯಪದ್ಧತಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಪ್ರಕೃತಿ ಚಿಕಿತ್ಸೆ ಹಾಗೂ ಅಕ್ಯೂಪಂಚರ್ ಆರೋಗ್ಯ ವಿಧಾನಗಳನ್ನು ಅಧ್ಯಯನ ಮಾಡಿರುವ ಇವರು ಪ್ರಸ್ತುತ ಅರೋಗ್ಯ ಮಂದಿರ ಟ್ರಸ್ಟ್ನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಕುಲತ ನೂರಾರು ಶಿಬಿರಗಳನ್ನು ರಾಜ್ಯಾದ್ಯಂತ ಏರ್ಪಡಿಸಿ ದೇಸೀ ಪದ್ಧತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿರುವ ಇವರು ಪ್ರಕೃತಿ ಜೀವನ ಕೇಂದ್ರದ ಸಕ್ರಿಯ ಕಾರ್ಯಕರ್ತರಲ್ಲೊಬ್ಬರು. ಯೋಗ ಶಿಕ್ಷಣದ ಮೂಲಕ ನಗರ ಜೀವನದ ಒತ್ತಡಗಳ ನಿವಾರಣೆಯ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ. ಮಲ್ಲಾಡಿ ಹಳ್ಳಿ, ಪಾಂಡಿಚೆಲ ಮುಂತಾದ ಕಡೆಗಳಲ್ಲಿ ಯೋಗಾಭ್ಯಾಸ ಶಿಬಿರಗಳನ್ನು ವ್ಯವಸ್ಥೆ ಮಾಡಿರುವ ಶ್ರೀ ಬಿ.ಎನ್. ಬ್ರಹ್ಮಾಚಾರ್ಯ ಅವರು ಪ್ರಕೃತಿ ಚಿಕಿತ್ಸಾ ತರಗತಿಗಳನ್ನು ಸಾರ್ವಜನಿಕರಿಗಾಗಿ ಏರ್ಪಡಿಸುತ್ತಿದ್ದಾರೆ. ಅಕ್ಯೂಪಂಚ ವೈದ್ಯ ವಿಧಾನವನ್ನು ಅಭ್ಯಾಸ ಮಾಡಿ ಅನೇಕರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿರುವ ಇವರು ಹಲವಾರು ದೇಸೀಯ ಚಿಕಿತ್ಸಾ ಸಮ್ಮೇಳನಗಳನ್ನು ರಾಜ್ಯಾದ್ಯಂತ ಏರ್ಪಡಿಸಿದ್ದಾರೆ.
ಪತಂಜಲಿ ಸ್ವರ್ಣ ಪದಕ, ಜಿಂದಾಲ್ ಟ್ರಸ್ಟ್ನ ಪ್ರಕೃತಿ ಚಿಕಿತ್ಸಾ ರತ್ನ ಹಾಗೂ ಭಾರತೀಯ ಪರ್ಯಾಯ ಔಷಧಿಗಳ ಸಂಸ್ಥೆಯ ಚಿನ್ನದ ಪದಕ ಪಡೆದಿರುವ ಶ್ರೀ ಬಿ.ಎನ್. ಬ್ರಹ್ಮಾಚಾರ್ಯ ಅವರು ಬೆಂಗಳೂರು ಯೋಗಕೇಂದ್ರದಿಂದಲೂ ಸನ್ಮಾನಿತರು.
ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಯೋಗ ಸ್ಪರ್ಧೆಗಳ ತೀರ್ಪುಗಾರರಾಗಿ ಹಾಗೂ ಕರ್ನಾಟಕ ಯೋಗ ತಂಡದ ವ್ಯವಸ್ಥಾಪಕರಾಣ ಶ್ರೀ ಬಿ.ಎನ್. ಬ್ರಹ್ಮಾಚಾರ್ಯ ಅವರು ಕಾರ್ಯನಿರ್ವಹಿಸಿದ್ದಾರೆ.
ಜನತೆಯ ಆರೋಗ್ಯದಲ್ಲಿ ಯೋಗದ ಮಹತ್ವವನ್ನು ಸಾರುತ್ತಿರುವ ಯೋಗ ಚಿಕಿತ್ಸಕ ಹಾಗೂ ಯೋಗ ಶಿಕ್ಷಕ ಶ್ರೀ ಬಿ.ಎನ್. ಬ್ರಹ್ಮಾಚಾರ್ಯ ಅವರು.