ಸರಳ ನಡೆನುಡಿಗೆ ಖಾದಿ ಪಾಟೀಲರೆಂದೇ ಹೆಸರಾದ ಅಪ್ಪಟ ಗಾಂಧೀವಾದಿ, ದೇಶಭಕ್ತ ಸಮಾಜ ಸೇವಕರು ಶ್ರೀ ಬಸವನಗೌಡ ಶಿವನಗೌಡ ಪಾಟೀಲ.
೧೯೩೧ರಲ್ಲಿ ಧಾರವಾಡ ಜಿಲ್ಲೆಯಲ್ಲಿ ಜನನ. ೧೯೫೧ರಲ್ಲಿ ಎನ್.ಸಿ.ಸಿ. ಸೇರ್ಪಡೆ, ಕರ್ನಾಟಕ ಕಾಲೇಜಿನಲ್ಲಿ ಕಾಲೇಜು ವಿದ್ಯಾಭ್ಯಾಸ. ೧೯೫೨ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ವೃತ್ತಿಜೀವನದ ಆರಂಭ. ದಿವಂಗತ ವೀರನಗೌಡ ಪಾಟೀಲ ಮತ್ತು ವೆಂಕಟೇಶ ಮಾಗಡಿ ಅವರಿಂದ ಖಾದಿ ದೀಕ್ಷೆ ಪಡೆದು ನೌಕರಿಗೆ ರಾಜೀನಾಮೆ.
ಸರ್ಕಾರಿ ನೌಕರರಾಗಿ, ಖಾದಿ ಕಾರ್ಯಕರ್ತರಾಗಿ, ಕೈಗಾರಿಕೋದ್ಯಮಿಯಾಗಿ, ಸಮಾಜ ಸೇವಕರಾಗಿ, ಪರಿಸರವಾದಿಯಾಗಿ, ನಗರ ಪಿತೃವಾಗಿ, ಮಹಾಪೌರರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳಲ್ಲಿ ವಿವಿಧ ಪದಾಧಿಕಾರಿಗಳ ಹುದ್ದೆಗಳನ್ನು ಅಲಂಕರಿಸಿ ಕಾರ್ಯನಿರ್ವಹಿಸಿದ್ದಾರೆ.
ಪ್ರಸ್ತುತ ಖಾದಿ ಗ್ರಾಮೋದ್ಯೋಗ ಆಯೋಗ, ಮುಂಬಯಿಯ ರೋನಲ್ ಕಮಿಟಿಯ ಸದಸ್ಯರು ಹಾಗೂ ತಮ್ಮ ಸೇವಾಕ್ಷೇತ್ರದಲ್ಲಿ ಪ್ರಾಮಾಣಿಕತೆಯ ಛಾಪು ಮೂಡಿಸಿರುವ ನಿಸ್ಪೃಹ ಸಮಾಜಸೇವಕ ಶ್ರೀ ಬಿ.ಎಸ್. ಪಾಟೀಲ ಅವರು.
Categories
ಶ್ರೀ ಬಿ.ಎಸ್. ಪಾಟೀಲ
