ಗುಲ್ಬರ್ಗಾ ಜಿಲ್ಲೆಯ ಸೇಡಂ ತಾಲ್ಲೂಕಿನ ಬೆನಕನಹಳ್ಳಿಯಲ್ಲಿ ೧೯೩೮ರಲ್ಲಿ ಜನಿಸಿದ ಶ್ರೀ ಬಿ.ಮಹಾದೇವಪ್ಪನವರು ಒಬ್ಬ ಅಧ್ಯಯನ ಶೀಲ, ಅಗಾಧ ಪಾಂಡಿತ್ಯ, ಪ್ರಖರ ವಿಚಾರಧಾರೆಯ ಬರಹಗಳಿಗೆ ಹೆಸರಾದವರು.
ಹೈದಾರಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ೧೯೫೯ರಲ್ಲಿ ಪದವಿಗಳಿಸಿ ಅನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವುದೇ ಅಲ್ಲದೆ ಪತ್ರಿಕೋದ್ಯಮದಲ್ಲೂ ಪದವಿಗಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕನ್ನಡ ಜಾಣ” ಪರೀಕ್ಷೆಯಲ್ಲೂ ತೇರ್ಗಡೆಯಾಗಿ ಕನ್ನಡ -ಅಂಗ್ಲ ಭಾಷೆಗಳೆರಡರಲ್ಲೂ ಪ್ರಭುತ್ವಗಳಿಸಿದ ಮೇಧಾವಿ.
ಆರಂಭದಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿ, ಮುಂದೆ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪ್ರತಿಕೆಗಳ ಬಾತ್ಮೀದಾರರಾಗಿ ಯಾದಗಿರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು, ಜೊತೆಜೊತೆಗೆ “ವಿಶ್ವಕಲ್ಯಾಣ” ವಾರಪತ್ರಿಕೆಯ ಸಂಪಾದಕರಾಗಿಯೂ ಸೇವೆಸಲ್ಲಿಸಿದ್ದಾರೆ. ಪತ್ರಿಕೋದ್ಯಮದ ಜೊತೆಗೇ ಶೈಕ್ಷಣಿಕ ಕ್ಷೇತ್ರದಲ್ಲೂ ದುಡಿದು ಕನ್ನಡದ ಅರೆಕಾಲಿಕ
2008 ನಾಯಕ ಉಪನ್ಯಾಸಕರಾಗಿ ಸಹ ದುಡಿದಿದ್ದಾರೆ.
ಬರಹಗಾರರಾಗಿ ವಿಚಾರಾತ್ಮಕ ವಿಷಯ ಲೇಖಕರಾಗಿ ಅನೇಕ ಸಮ್ಮೇಳಗಳಲ್ಲಿ ಪ್ರಭಂದ ಲೇಖನಗಳನ್ನು ಮಂಡಿಸಿ ಪ್ರಕಟಿಸಿದ್ದಾರೆ ಸಾಮಾಜಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ಪತ್ರಿಕಾ ಅಕಾಡೆಮಿ ಸದಸ್ಯರಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯಪರಿಷತ್ತಿನ ಜಿಲ್ಲಾ ಪ್ರತಿನಿಧಿಯಾಗಿ ಬಹುಮುಖ ಸೇವೆ ಸಲ್ಲಿಸಿರುವ ಶ್ರೀ ಬಿ. ಮಹಾದೇವಪ್ಪನವರಿಗೆ ಸಂದಿರುವ ಪ್ರಶಸ್ತಿಗಳು ಅಪಾರ.
Categories
ಶ್ರೀ ಬಿ. ಮಹಾದೇವಪ್ಪ
