೧೯೩೫ರಲ್ಲಿ ಚಿತ್ರದುರ್ಗ ಜಿಲ್ಲೆಯ ಘಟಪರ್ತಿಯಲ್ಲಿ ಜನಿಸಿದ ಪ್ರೊ.ಬಿ.ವಿ.ವೀರಭದ್ರಪ್ಪನವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಗಳಿಸಿ ದಾವಣಗೆರೆಯ ಎ.ಆರ್.ಬಿ. ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ನಿವೃತ್ತರಾದವರು. ಉತ್ತಮ ಬೋಧಕರು, ದಕ್ಷ ಆಡಳಿತಗಾರರೂ ಎಂಬ ಖ್ಯಾತಿಗೆ ಭಾಜನರಾದ ಶ್ರೀಯುತರು ನಾಡಿನ ಒಬ್ಬ ವಿಶಿಷ್ಟ ವಿಚಾರವಾದಿಯಾಗಿ, ಪ್ರಸಿದ್ಧ ಲೇಖಕರಾಗಿ ಹೆಸರುಗಳಿಸಿದ್ದಾರೆ. ಭಾಷಾ ವಿಜ್ಞಾನ, ಕಿರಿಯರ ವಿಚಾರ ಸಾಹಿತ್ಯ, ಮಾನವಿಕ ವೈಚಾರಿಕ ಸಾಹಿತ್ಯ ಮುಂತಾಗಿ ಸುಮಾರು ಒಂಭತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಪ್ರೊ. ಬಿ.ವಿ. ವೀರಭದ್ರಪ್ಪ ಅವರಿಗೆ ‘ವೇದಾಂತ ರೆಜಿಮೆಂಟ್’ ಮತ್ತು ‘ಇತರ ವೈಚಾರಿಕ ಬರಹಗಳು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಭಗವದ್ಗೀತೆ, ಒಂದು ವೈಚಾರಿಕ ಒಳನೋಟ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಎಚ್.ಎನ್. ದತ್ತಿನಿಧಿ ಪ್ರಶಸ್ತಿ ಮತ್ತು ಮುಂಬಯಿ ಕರ್ನಾಟಕ ಸಂಘದ ಅ.ಸು. ಕೃಷ್ಣರಾವ್ ಸ್ಮಾರಕ ಪ್ರಶಸ್ತಿ ದೊರಕಿದೆ.
ಶಿಕ್ಷಣ ತಜ್ಞರೂ, ಚಿಂತಕರೂ ಆಗಿ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವವರು ಪ್ರೊ. ಬಿ.ವಿ. ವೀರಭದ್ರಪ್ಪ ಅವರು.
Categories
ಶ್ರೀ ಬಿ.ವಿ. ವೀರಭದ್ರಪ್ಪ
