Categories
ಯಕ್ಷಗಾನ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ. ಶೀನಪ್ಪ ಭಂಡಾರಿ

ಸ್ತ್ರೀ ಪಾತ್ರಗಳು, ರೌದ್ರಪಾತ್ರಗಳಿಂದ ಯಕ್ಷಗಾನ ರಂಗದಲ್ಲಿ ಮಹತ್ತರ ಸಾಧನೆ ಮಾಡಿದ ಯಕ್ಷಗಾನ ಕಲಾವಿದರು ಶ್ರೀ ಚಿ. ಶೀನಪ್ಪ ಭಂಡಾಲ ಅವರು.
೧೯೨೬ರಲ್ಲಿ ಕಾಸರಗೋಡಿನ ಪೆರಡಾದ ನೆಲ್ಲಕುಂಜದಲ್ಲಿ ಜನನ. ಆರನೆಯ ತರಗತಿ ತನಕ ವಿದ್ಯಾಭ್ಯಾಸ. ಹಿಲಯ ಭಾಗವತ ಶ್ರೀ ಜತ್ತಪ್ಪ ರೈಗಳು ಸೋದರಮಾವ. ಅವಲಂದ ಪ್ರೇರಣೆ ಪಡೆದ ಶ್ರೀ 9. ಶೀನಪ್ಪ ಭಂಡಾಲ ತೆಂಕು ತಿಟ್ಟಿನ ನರ್ತಕರಾದ ದಿವಂಗತ ಕಾವು ಕಣ್ಣನವರು ಕುಣಿತದ ಗುರು. ಕದ್ರಿ ಮೇಳದಿಂದ ಯಕ್ಷಗಾನ ರಂಗಕ್ಕೆ ಪದಾರ್ಪಣ, ನಂತರ ಮುಟ್ಟಿ ಮೇಳದಲ್ಲಿ, ನಂತರ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಹತ್ತೊಂಬತ್ತು ವರ್ಷಗಳು ಸೇವೆ ಸಲ್ಲಿಕೆ. ಸ್ವಂತವಾಗಿ ಬಳ್ಳಂಬೆಟ್ಟು ಮತ್ತು ಆವಿಸುಬ್ರಹ್ಮಣ್ಯ ಮೇಳಗಳ ರಚನೆ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ ಮುಂತಾದ ಸ್ಥಳಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿಕೆ, ಬನ್ನೂರು ಎಂಬಲ್ಲ ‘ಯಕ್ಷಗಾನ ಕುಟೀರ’ ಸ್ಥಾಪನೆ. ಹಲವಾರು ಶಿಷ್ಯಂಱಲಗೆ ಯಕ್ಷಗಾನ ಶಿಕ್ಷಣ ನೀಡಿಕೆ.
ಭಸ್ಮಾಸುರ, ರಕ್ತಬೀಜ, ಶಿವ, ಅರ್ಜುನ, ಜಲಂಧರ, ತಾಮ್ರಧ್ವಜ, ಕೌರವ, ದೇವೇಂದ್ರ, ಇಂದ್ರಜಿತು ಮೊದಲಾದ ವೇಷಗಳನ್ನು ಅತ್ಯಂತ ಸುಲಭವಾಗಿ ನಿರ್ವಹಿಸುವ ಕೀರ್ತಿಗೆ ಪಾತ್ರರು. ತಾಳಮದ್ದಳೆ ಅರ್ಥಧಾಲಯಾಗಿಯೂ ಅನುಭವ, ತುಳು ಪ್ರಸಂಗಗಳಲ್ಲಿಯೂ ಪಾತ್ರ ವಹಿಸಿ ಪ್ರಸಿದ್ಧಿ ಪಡೆದವರು. ಸೀತಾಕಲ್ಯಾಣ, ಕೌಸಲ್ಯಾ ಪರಿಣಯ ಮುಂತಾದ ರಂಗದಿಂದ ಮರೆಯಾದ ಪ್ರಸಂಗಗಳನ್ನು ಪುನಃ ರಂಗಕ್ಕೆ ತಂದ ಯಶಸ್ವಿಗೆ ಪಾತ್ರರು.
ತೆಂಕುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಅರ್ಧಶತಮಾನ ಮೇಳಗಳ ಸಂಘಟಕರಾಗಿ, ಅಸಾಧಾರಣ ಪ್ರತಿಭೆಯ ಪ್ರಯೋಗಶೀಲ ಕಲಾವಿದರಾಗಿ ಯಕ್ಷಗಾನ ಕಲಾರಂಗವನ್ನು ಶ್ರೀಮಂತಗೊಳಿಸಿದ ಅಗ್ರಗಣ್ಯ ಕಲಾವಿದರು ಶ್ರೀ ಶೀನಪ್ಪ ಭಂಡಾಲ ಅವರು.