Categories
ಕ್ರೀಡೆ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ. ಸಿ. ಸುರೇಶ್

ಹಳ್ಳಿಗಾಡಿನಲ್ಲಿ ಹುಟ್ಟಿ ದೇಸಿ ಕ್ರೀಡೆ ಕಬಡ್ಡಿಯಲ್ಲಿ ನೈಪುಣ್ಯತೆ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದವರು ಶ್ರೀ ಬಿ.ಸಿ. ಸುರೇಶ್ ಅವರು.
ಚನ್ನಪಟ್ಟಣದ ಸಂಕಲಗೆರೆಯವರಾದ ಬಿ.ಸಿ. ಸುರೇಶ್ ಅವರು ಕಳೆದ ಒಂದೂವರೆ ದಶಕದಿಂದ ಕಬಡ್ಡಿ ರಂಗದಲ್ಲಿ ಹೆಸರು ಮಾಡಿದ್ದಾರೆ.
ಚಿಕ್ಕಂದಿನಿಂದಲೇ ಈ ಹಳ್ಳಿ ಆಟದಲ್ಲಿ ಆಸಕ್ತಿ ಮೂಡಿಸಿಕೊಂಡು ಸತತ ಪಲಶ್ರಮದಿಂದ ರಾಜ್ಯ ತಂಡದಲ್ಲಿ ಸ್ಥಾನ ಗಳಿಸಿಕೊಂಡ ಸುರೇಶ್ ಹಿಂತಿರುಗಿ ನೋಡಲಿಲ್ಲ. ಕರ್ನಾಟಕ ರಾಜ್ಯ ತಂಡಕ್ಕೆ ಮೂರು ಬಾಲ ನಾಯಕರಾಗಿದ್ದ ಇವರು ೧೩ ವರ್ಷಗಳ ಕಾಲ ರಾಷ್ಟ್ರೀಯ ಪಂದ್ಯಾವಆಗಳಲ್ಲಿ ಪಾಲ್ಗೊಂಡಿದ್ದಾರೆ.
ಎಂಟು ಬಾಲ ದಕ್ಷಿಣ ವಲಯವನ್ನು ಪ್ರತಿನಿಧಿಸಿರುವ ಸುರೇಶ್ ೬ ವರ್ಷ ಫೆಡರೇಷನ್ ಕಪ್ ಪಂದ್ಯಾವಆಗಳಲ್ಲಿ ಭಾಗವಹಿಸಿದ್ದು ದೇಶದ ಪ್ರಮುಖ ಕಬಡ್ಡಿ ಆಟಗಾರರೆನ್ನಿಸಿಕೊಂಡಿದ್ದಾರೆ.
ದಕ್ಷಿಣ ಕೊಲಿಯಾದಲ್ಲಿ ಜರುಣದ (೨೦೦೨) ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದ ಭಾರತ ತಂಡದಲ್ಲಿದ್ದ ಸುರೇಶ್ ಮೊದಲ ವಿಶ್ವಕಪ್ ಕಬಡ್ಡಿ ಪಂದ್ಯಾವಆಗಳಲ್ಲಿ ಅಗ್ರಸ್ಥಾನ ಗಳಿಸಿದ ಭಾರತ ತಂಡದ ಉಪ ನಾಯಕ. ಅಂತರರಾಷ್ಟ್ರೀಯ ಕಬಡ್ಡಿ ಟೂರ್ನಿಯಲ್ಲ (೨೦೦೪) ಭಾರತ ತಂಡದ ನಾಯಕತ್ವ ವಹಿಸಿದ್ದ ಬಿ.ಸಿ. ಸುರೇಶ್ ಅವರು, ಎರಡು ಬಾಲ ಸ್ಕಾಫ್ ಗೇಮ್ಸ್ (೧೯೯೯-೨೦೦೪) ಎರಡು ವರ್ಷ ಏಷ್ಯನ್ ಚಾಂಪಿಯನ್ ಷಿಪ್ಗಳಲ್ಲಿ ಭಾರತ ತಂಡದ ಆಟಗಾರ,
ಭಾರತಕ್ಕೆ ಹಾಗೂ ಕರ್ನಾಟಕ ತಂಡಕ್ಕೆ ತಮ್ಮ ಚಾಕಚಕ್ಯತೆ ಅಟದಿಂದ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಡುವ ಮುಖ್ಯ ಪಾತ್ರವಹಿಸಿರುವ ಬಿ. ಸಿ. ಸುರೇಶ್ ಅವರಿಗೆ ದೊರಕಿರುವ ಪ್ರಶಸ್ತಿ ಪುರಸ್ಕಾರಗಳು ಹಲವಾರು. ಅವುಗಳಲ್ಲ ಏಕಲವ್ಯ ಪ್ರಶಸ್ತಿ, ಕರ್ನಾಟಕ ಒಲಂಪಿಕ್ ಸಂಸ್ಥೆ ಪುರಸ್ಕಾರ ಹಾಗೂ ಕೆಂಪೇಗೌಡ ಪ್ರಶಸ್ತಿಗಳು ಪ್ರಮುಖವಾದವು. ದೇಶ ವಿದೇಶಗಳಲ್ಲಿ ತಮ್ಮ ಪ್ರತಿಭೆ ಸಾದರಪಡಿಸಿರುವ ಅತ್ಯುತ್ತಮ ಕಬಡ್ಡಿ ಪಟು ಶ್ರೀ ಬಿ.ಸಿ. ಸುರೇಶ್ ಅವರು.