ವಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಯಲಗೋಡದ ಬಯಲಾಟ ಕಲಾವಿದ ಭೀಮರಾಯ ಬೋರಗಿ, ಸಂಗೀತವನ್ನೇ ನೆಚ್ಚಿ ಬಯಲಾಟವನ್ನೇ ಬದುಕಿನ ಬುತ್ತಿಯಾಗಿಸಿಕೊಂಡವರು.
ಕಡುಬಡತನದ ಹಿನ್ನೆಲೆಯ ಭೀಮರಾಯ ಬೋರಗಿ ಅವರು ಓದಿದ್ದು ಕೇವಲ ನಾಲ್ಕನೇ ತರಗತಿ ಮಾತ್ರ ಆ ವೇಳೆಗೆ ಮನಸೆಳೆದ ಬಯಲಾಟವನ್ನು ಉಸಿರಾಗಿಸಿಕೊಂಡರು. ರಾಜ್ಯಾದ್ಯಂತ ಬಯಲಾಟದ ಸಂಗೀತ ಕಲಾವಿದರಾಗಿ ಮೂಡಿಸಿದ ಛಾಪು ಅಪಾರ. ಶ್ರೀದೇವಿ ಮಹಾತ್ಮ, ಮಹಿಷಾಸುರ ಮರ್ಧಿನಿ, ಭೀಮಾರ್ಜುನರ ಕಾಳಗ, ಚಿತ್ರಸೇನೆ ಗಂಧರ್ವ ಮುಂತಾದ ಸುಮಾರು ೪೦೦ ಬಯಲಾಟಗಳನ್ನು ನಿರ್ದೇಶಿಸಿ ಪ್ರಸ್ತುತಪಡಿಸಿದ ಹಿರಿಮೆ ಇವರದ್ದು. ಬಯಲಾಟದ ಹಿರಿಯ ಕಲಾವಿದರಾಗಿ ಆ ಕಲೆಯ ಉಳಿವಿಗೆ ಹಲವು ದಶಕಗಳ ಕಾಲ ಶ್ರಮಿಸಿದ ಭೀಮರಾಯ ಬೋರಗಿ ಅವರ ಕಲಾಸೇವೆಗೆ ಜನಮನ್ನಣೆ- ಚಪ್ಪಾಳೆಗಳೇ ಪ್ರಶಸ್ತಿ, ಮೆಚ್ಚುಗೆಯ ಮಾತುಗಳೇ ಸನ್ಮಾನ. ದೇಸೀ ಪ್ರತಿಭಾಶಕ್ತಿಗೊಂದು ರೂಪಕ.
Categories
ಶ್ರೀ ಭೀಮರಾಯ ಬೋರಗಿ
