Categories
ಬಯಲಾಟ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಭೀಮರಾಯ ಬೋರಗಿ

ವಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಯಲಗೋಡದ ಬಯಲಾಟ ಕಲಾವಿದ ಭೀಮರಾಯ ಬೋರಗಿ, ಸಂಗೀತವನ್ನೇ ನೆಚ್ಚಿ ಬಯಲಾಟವನ್ನೇ ಬದುಕಿನ ಬುತ್ತಿಯಾಗಿಸಿಕೊಂಡವರು.
ಕಡುಬಡತನದ ಹಿನ್ನೆಲೆಯ ಭೀಮರಾಯ ಬೋರಗಿ ಅವರು ಓದಿದ್ದು ಕೇವಲ ನಾಲ್ಕನೇ ತರಗತಿ ಮಾತ್ರ ಆ ವೇಳೆಗೆ ಮನಸೆಳೆದ ಬಯಲಾಟವನ್ನು ಉಸಿರಾಗಿಸಿಕೊಂಡರು. ರಾಜ್ಯಾದ್ಯಂತ ಬಯಲಾಟದ ಸಂಗೀತ ಕಲಾವಿದರಾಗಿ ಮೂಡಿಸಿದ ಛಾಪು ಅಪಾರ. ಶ್ರೀದೇವಿ ಮಹಾತ್ಮ, ಮಹಿಷಾಸುರ ಮರ್ಧಿನಿ, ಭೀಮಾರ್ಜುನರ ಕಾಳಗ, ಚಿತ್ರಸೇನೆ ಗಂಧರ್ವ ಮುಂತಾದ ಸುಮಾರು ೪೦೦ ಬಯಲಾಟಗಳನ್ನು ನಿರ್ದೇಶಿಸಿ ಪ್ರಸ್ತುತಪಡಿಸಿದ ಹಿರಿಮೆ ಇವರದ್ದು. ಬಯಲಾಟದ ಹಿರಿಯ ಕಲಾವಿದರಾಗಿ ಆ ಕಲೆಯ ಉಳಿವಿಗೆ ಹಲವು ದಶಕಗಳ ಕಾಲ ಶ್ರಮಿಸಿದ ಭೀಮರಾಯ ಬೋರಗಿ ಅವರ ಕಲಾಸೇವೆಗೆ ಜನಮನ್ನಣೆ- ಚಪ್ಪಾಳೆಗಳೇ ಪ್ರಶಸ್ತಿ, ಮೆಚ್ಚುಗೆಯ ಮಾತುಗಳೇ ಸನ್ಮಾನ. ದೇಸೀ ಪ್ರತಿಭಾಶಕ್ತಿಗೊಂದು ರೂಪಕ.