– ತನ್ನ ನಿತ್ಯ ಕಾಯಕದಲ್ಲೇ ನೂರೆಂಟು ಕುಸುರಿ ಕಲೆ ಅರಳಿಸಿ ಎಲ್ಲರ ಗಮನ ಸೆಳೆಯಬಲ್ಲ ಅಪರೂಪದ ಬಿದರಿ ಕಲಾವಿದ ಶ್ರೀ ಮಹಮದ್ ಶರೀಫ್ ಗುಲ್ಬನ್ ಬಿದರಿ ಅವರು.
ಬೀದರ್ ನಗರದ ಕುಸುವಾಗಲ್ಲಿಯಲ್ಲಿ ೧೯೩೯ರಲ್ಲಿ ಜನಿಸಿದ ಶರೀಫರು ಚಿಕ್ಕಂದಿನಿಂದಲೇ ಬಿದರಿ ಕಲೆಯಲ್ಲಿ ನೈಪುಣ್ಯವನ್ನು ಮೆರೆದವರು, ಗ್ಲೋಬಲೈಸ್, ಮಾಸ್ಟರ್ಲೈಸ್, ಉಮರ್ ಖಯಾಂ ಮಾದರಿಯ ಬಿದರಿ ಕೆಲಸಗಳನ್ನು ಮಾಡಿ ದೇಶದ ಮೂಲೆ ಮೂಲೆಯಲ್ಲಿ ಮಾರಾಟ ಮಾಡುವುದಲ್ಲದೆ ಹೊರದೇಶಗಳಿಗೂ ರಫ್ತು ಮಾಡುವ ಅಪಾರ ಬೇಡಿಕೆಯ ಕಲೆ ಇವರದು. ಇವರ ಬಿದರಿ ಕಲೆಯ ನೈಪುಣ್ಯತೆಗೆ ೧೯೭೮ರಲ್ಲಿ ಕರ್ನಾಟಕ ನಿಪುಣ ಶಿಲ್ಪಾಚಾರ ಪ್ರಶಸ್ತಿ, ಭಾರತದ ಇಂಡಸ್ಟ್ರೀಸ್ ಅಂಡ್ ಕಾಮರ್ಸ್ ಇಲಾಖಾ ಪ್ರಶಸ್ತಿಗಳಲ್ಲದೆ ಅನೇಕ ಸಂಘ ಸಂಸ್ಥೆಗಳಿಂದಲೂ ಪುರಸ್ಕಾರ, ಬಹುಮಾನಗಳು ಲಭಿಸಿವೆ.
೬೫ರ ಇಳಿವಯಸ್ಸಿನಲ್ಲೂ ಆರ್ಥಿಕ ಅಡಚಣೆಗಳ ನಡುವೆಯೂ ತಮ್ಮ ಬಿದರಿ ಕಲೆ ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ಅಪರೂಪದ ಕುಶಲಕರ್ಮಿ ಶ್ರೀ ಮಹಮದ್ ಶರೀಫ್ ಗುಲ್ಡನ್ ಅವರು.
Categories
ಶ್ರೀ ಮಹಮದ್ ಷರೀಫ್ ಗುಲ್ಬನ್
