Categories
ಜಾನಪದ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮಹೇಶ್ವರಗೌಡ ಹನುಮಂತಗೌಡ ಲಿಂಗದಹಳ್ಳಿ

ಕಲೆಯನ್ನೇ ಬದುಕಿಗೆ ನೆಲೆ, ಭಾವದ ಸೆಲೆಯಾಗಿಸಿಕೊಂಡು ಸೇವೆ ಸಲ್ಲಿಸಿದ ಜಾನಪದ ಸಾಧಕರು ಮಹೇಶ್ವರಗೌಡ ಹನುಮಂತಗೌಡ ಲಿಂಗದಹಳ್ಳಿ, ಸುವರ್ಣ ಕಲಾಬದುಕಿನ ಹಿರಿಮೆಯುಳ್ಳ ವಿಶಿಷ್ಟ ಪುರವಂತಿಕೆ ಕಲಾವಿದರು. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಬತ್ತಿಕೊಪ್ಪದಲ್ಲಿ ೧೯೫೭ರಲ್ಲಿ ಜನಿಸಿದ ಮಹೇಶ್ವರಗೌಡ ಕಲಾಕುಟುಂಬದ ಕೂಸು, ಜನಪದೀಯ ಕಲೆಯಾದ ಪುರವಂತಿಕೆ ಅಪ್ಪನಿಂದ ಬಂದ ಬಳುವಳಿ ಹತ್ತನೇ ವಯಸ್ಸಿನಿಂದಲೇ ಈ ಕಲೆಗೆ ಬದುಕು ಸಮರ್ಪಿತ, ಗ್ರಾಮೋತ್ಸವಗಳಲ್ಲಿ ಆರಂಭವಾದ ಕಲಾಪ್ರದರ್ಶನ ರಾಜ್ಯ, ರಾಷ್ಟ್ರಮಟ್ಟಕ್ಕೂ ವಿಸ್ತಾರಗೊಂಡಿದ್ದು ವಿಶೇಷ, ಧಾರವಾಡ ಆಕಾಶವಾಣಿ, ಬೆಂಗಳೂರು ದೂರದರ್ಶನ, ಹಂಪಿ ಉತ್ಸವ, ಗಣರಾಜ್ಯೋತ್ಸವಮ, ಕಂದಬೋತ್ಸವ, ಆನೆಗುಂದಿ ಉತ್ಸವ, ದಸರಾ, ಲಕ್ಕುಂಡಿ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಆಳ್ವಾಸ್ ನುಡಿಸಿರಿ, ವಿಶ್ವಕನ್ನಡ ಸಮ್ಮೇಳನ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ, ರಾಜಸ್ಥಾನದ ಲೋಕರಂಗ ಉತ್ಸವ ಮುಂತಾದೆಡೆ ಬೆಳಗಿದ ಜನಪದ ಪ್ರತಿಭೆ, ೫೫ ವರ್ಷಗಳಿಂದಲೂ ಕಲಾಸೇವಾ ನಿರತ ಮಹೇಶ್ವರಗೌಡ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳಿಂದ ಭೂಷಿತರಾದ ದೇಸೀ ಕಲಾಚೇತನ.