ಜಾನಪದ ನೃತ್ಯಗಳಲ್ಲಿ ಒಂದಾದ ಗೊರವರ ಕುಣಿತದ ಹಿರಿಯ ಕಲಾವಿದರು ಶ್ರೀ ಮಾದೇಗೌಡ ಅವರು.
ಎಳವೆಯಲ್ಲೇ ಗೊರವರ ಕುಣಿತದಲ್ಲಿ ಆಸಕ್ತಿ ತಳೆದು ಶ್ರೀ ಪುಟ್ಟಮಲ್ಲೇಗೌಡ ಇವರ ಬಳಿ ಗೊರವರ ಕುಣಿತ ಕಲಿತರು. ಸುಮಾರು ಆರು ದಶಕಗಳ ಕಾಲ ಗೊರವರ ಕುಣಿತದಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ದೆಹಲಿಯ ಅಪ್ಪಾ ಉತ್ಸವ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಶ್ರೀ ಮಾದೇಗೌಡರು ತಮ್ಮ ಅದ್ಭುತ ಕುಣಿತದಿಂದ ಜಾನಪದದ ಈ ವಿಶಿಷ್ಟ ಕಲೆಗೆ ಜೀವ ತುಂಬಿದ್ದಾರೆ.
ಶ್ರೀಯುತರು ಜಾನಪದ ಕಲೆಗೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ೨೦೦೨ ರ ಸಾಲಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.
ಜಾನಪದದ ವಿಶಿಷ್ಟ ಕಲೆಯಾದ ಗೊರವರ ಕುಣಿತವನ್ನು ಕಿರಿಯರಿಗೆ ಕಲಿಸುತ್ತ ಮುಂದಿನ ತಲೆಮಾರಿಗೂ ತಲುಪಿಸುತ್ತಿರುವ ಎಂಬತ್ತು ವರ್ಷದ ಶ್ರೀ ಮಾದೇಗೌಡರು ಗೊರವರ ಕುಣಿತದ ವಿಶಿಷ್ಟ ಕಲಾವಿದರು.
ಸಹಜ ಪ್ರತಿಭೆ, ಹಾಗೂ ಸತತ ಪರಿಶ್ರಮಗಳಿಂದ ಗೊರವರ ಕುಣಿತಕ್ಕೆ ವಿಶಿಷ್ಟತೆ ತಂದುಕೊಟ್ಟ ಆಧುನಿಕತೆಯ ಅಬ್ಬರದಲ್ಲೂ ನಾಡಿನ ಜಾನಪದ ಸಂಸ್ಕೃತಿಯ ಜೀವನದಿ ಬತ್ತದಂತೆ ನೋಡಿಕೊಳ್ಳುತ್ತಿರುವ ಹಿರಿಯ ಕಲಾವಿದರು ಶ್ರೀ ಮಾದೇಗೌಡ ಅವರು.
Categories
ಶ್ರೀ ಮಾದೇಗೌಡ
